ವಿದ್ಯುತ್ ಸ್ಪರ್ಶಿಸಿ ಮೂವರ ಸಾವು


ತೋಟದಲ್ಲಿ ಕಬ್ಬಿಣದ ಏಣಿಯ ಸಹಾಯದಿಂದ ತೆಂಗಿನ ಕಾಯಿಯನ್ನು ಕೀಳುವ ಸಂದರ್ಭ ವಿದ್ಯುತ್ ಸ್ಪರ್ಶಿಸಿ ಮೂವರು ಕಾರ್ಮಿಕರು ಸ್ಥಳದಲ್ಲಿಯೇ ಅಸು ನೀಗಿರುವ ಘಟನೆ ವರದಿಯಾಗಿದೆ. ಗೋಣಿಕೊಪ್ಪ ಸಮೀಪದ ಅರ್ವತ್ತೊಕ್ಲುವಿನ ರಾಮಜಮ್ಮ ಎಂಬುವರಿಗೆ ಸೇರಿದ ತೋಟದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕಾವಡಿ ಗ್ರಾಮದ ಧರ್ಮಜ್ಜ (50), ರವಿ (40) ಮತ್ತು ಸತೀಶ್ (50) ಎಂಬುವವರೇ ಮೃತ ನತದೃಷ್ಟರಾಗಿದ್ದಾರೆ. ಇವರುಗಳು ಇಂದು ಬೆಳಿಗ್ಗೆ ತೋಟದಲ್ಲಿ ತೆಂಗಿನಕಾಯಿ ಕೀಳುತ್ತಿದ್ದಾಗ ಕಬ್ಬಿಣದ ಏಣಿಗೆ ತೆಂಗಿನ ಮರದ ಪಕ್ಕದಲ್ಲಿ ಹಾದುಹೋಗಿದ್ದ ವಯರ್ ನಿಂದ ವಿದ್ಯುತ್ ಸ್ಪರ್ಶಿಸಿದೆ.  ಇದರಿಂದ ವಿದ್ಯುತಾಘಾತಕ್ಕೊಳಗಾದ ಧರ್ಮಜ್ಜ, ರವಿ ಮತ್ತು ಸತೀಶ್ ರವರು ಸ್ಥಳದಲ್ಲಿಯೇ ಅಸುನೀಗಿದ್ದು, ಮೃತದೇಹಗಳು ಸುಟ್ಟು ಕರಕಲಾಗಿವೆ.  ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿರಿಯ ರಾಜಕಾರಣಿ ಜೆ.ಎ ಕರುಂಬಯ್ಯ ನಿಧನ

ಹಿರಿಯ ರಾಜಕಾರಣಿ ಜೆ.ಎ.ಕರುಂಬಯ್ಯ ನಿಧನ
ಮಡಿಕೇರಿ ಏ ೧ :  ದಕ್ಷ, ಪ್ರಾಮಾಣಿಕ, ಹಿರಿಯ ರಾಜಕಾರಣಿ, ಕೊಡಗು ಜಿಲ್ಲಾ ಪರಿಷತ್ ನ ಮಾಜಿ ಅಧ್ಯಕ್ಷ ಜೆ.ಎ.ಕರುಂಬಯ್ಯ ಅವರು ಇಂದು ಮುಂಜಾನೆ ನಿಧನರಾಗಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಕರುಂಬಯ್ಯ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ

ಕೊಡಗು ಬ್ರೇಕಿಂಗ್

ಕೊಡಗು ಬ್ರೇಕಿಂಗ್
* ಕಾಫಿ ತೋಟದಲ್ಲಿ ವಿದ್ಯುತ್ ಸ್ಪರ್ಶಿಸಿ ಮೂವರ ದುರ್ಮರಣ
* ಕೊಡಗು ಜಿಲ್ಲೆಯ ಗೋಣಿಕೊಪ್ಪ ಸಮೀಪದ ಅರುವತೋಕ್ಲು ಗ್ರಾಮದಲ್ಲಿ ಘಟನೆ.
* ಕಾವಾಡಿ ಗ್ರಾಮದ ಧರ್ಮಜ್ಜ(50), ರವಿ(40) ಹಾಗೂ ಸತೀಶ್ (50) ಮೃತ ದುರ್ದೈವಿಗಳು
* ತೋಟದಲ್ಲಿ ತೆಂಗಿನ ಕಾಯಿ ಕೀಳುವ ಸಂದರ್ಭ ಕಬ್ಬಿಣದ ಏಣಿ ವಿದ್ಯುತ್ ತಂತುಗೆ ತಗುಲಿ ನಡೆದ ಅವಘಡ.
* ರಾಮಜನ್ಮ ಎಂಬವರ ತೋಟವನ್ನು ಲೀಸ್ ಗೆ ಪಡೆಯಲಾಗಿತ್ತು.
* ಮೂವರ ದೇಹಗಳು ಕರಲಾಗಿವೆ.
* ಗೋಣಿಕೊಪ್ಪಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.
* ವೀರಾಜಪೇಟೆ ತಾಲ್ಲೂಕಿನ ಅರುವತೋಕ್ಲು ಗ್ರಾಮ

ಶ್ರೀ ವಿಜಯವಿನಾಯಕದಲ್ಲಿ ಭಕ್ತರಿಗೆ ಬೇವು - ಬೆಲ್ಲ

ಶ್ರೀ ವಿಜಯವಿನಾಯಕದಲ್ಲಿ ಭಕ್ತರಿಗೆ ಬೇವು - ಬೆಲ್ಲ

ಮಡಿಕೇರಿ : ನಗರದ ಪ್ರಸಿದ್ಧ ಶ್ರೀ ವಿಜಯ ವಿನಾಯಕ ದೇವಾಲಯದಲ್ಲಿ ತಾ. 6ರಂದು ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಅಲಂಕಾರ ಹಾಗೂ ಪೂಜೆಗಳು ನಡೆಯಲಿವೆ.
ಭಕ್ತರಿಗೆ ಅಂದು ಬೆಳಿಗ್ಗೆ 6.30 ರಿಂದ 12ರವರೆಗೆ ಹಾಗೂ ಸಂಜೆ 5 ರಿಂದ 8ರವರೆಗೆ ಬೇವು-ಬೆಲ್ಲ, ಸಿಹಿಬೂಂದಿ ಪ್ರಸಾದ ವಿನಿಯೋಗ ನಡೆÀಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ನಾಯಿ ಮರಿಯೊಂದಿಗೆ ಆಟವಾಡುತ್ತಿದ್ದ ಬಾಲಕಿ ಕೆರೆಗೆ ಬಿದ್ದು ಸಾವು...ಸುಂಟಿಕೊಪ್ಪದ ೭ನೇ ಹೊಸಕೋಟೆಯಲ್ಲಿ ಘಟನೆ

*ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿ ಕೆರೆಗೆ ಬಿದ್ದು  ಸಾವು.
: ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕೆರೆಯೊಳಗೆ ಬಿದ್ದು ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.  ಸುಂಟಿಕೊಪ್ಪ ಸಮೀಪದ 7ನೇ ಹೊಸಕೋಟೆಯ ದಾಸಂಡ ರಂಜನ್ ಎಂಬುವವರ ತೋಟದಲ್ಲಿ ಕಾರ್ಮಿಕರಾಗಿರುವ ಚೋಮ ಎಂಬುವವರ ಪುತ್ರಿ ಭಾರತಿ (13) ಎಂಬಾಕೆಯೇ ನಾಯಿಯೊಂದಿಗೆ ಆಟವಾಡುತ್ತಾ ಕೆರೆಗೆ ಆಹುತಿಯಾಗಿ ಮೃತ ನತದೃಷ್ಟ ಬಾಲಕಿಯಾಗಿದ್ದಾಳೆ.  ಎಂಟನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಈಕೆ ಇಂದು (ತಾ.31) ಬೆಳಿಗ್ಗೆ ಅಂದಾಜು  11.30ರ ಸಮಯದಲ್ಲಿ ತೋಟದ ಲೈನ್ ಮನೆಯ ಪಕ್ಕದಲ್ಲಿ ಮುದ್ದಿನ ಸಾಕು ನಾಯಿಯೊಂದಿಗೆ ಆಟವಾಡುತ್ತಿದ್ದಳು.  ಆಟದ ನಡುವೆ ಭಾರತಿಯನ್ನು ನಾಯಿ ಓಡಿಸಿಕೊಂಡು ಹೋಗಿದೆ.  ಆಟವಾಡುತ್ತಿದ್ದ ಜಾಗದ ಒತ್ತಿನಲ್ಲಿ ಇಳಿಜಾರಿನಿಂದ ಕೂಡಿದ ಪ್ರದೇಶದಲ್ಲಿ ಕೆರೆಯೊಂದಿದ್ದು ನಾಯಿಯ ಕೈಗೆ ಸಿಗದಂತೆ ಓಡುತ್ತಿದ್ದ ಭಾರತಿ ನಿಯಂತ್ರಣ ಕಳೆದುಕೊಂಡು ಅದರೊಳಗೆ ಜಾರಿ ಬಿದ್ದಿದ್ದಾಳೆ.  ನಂತರ ಮೇಲಕ್ಕೆ ಬರಲಾಗದೇ ಇಹಲೋಕ ತ್ಯಜಿಸಿದ್ದಾಳೆ.  ಕುಶಾಲನಗರ ಆಸ್ಪತ್ರೆಯಲ್ಲಿ ಬಾಲಕಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸಂಬಂಧಿಕರಿಗೆ ಒಪ್ಪಿಸಲಾಗಿದೆ. 

ಆಧಾರ್-ಪ್ಯಾನ್ ಲಿಂಕ್ ಗಡುವು ತಿಂಗಳು ವಿಸ್ತರಣೆ.


ಆಧಾರ್‌-ಪ್ಯಾನ್‌ ಲಿಂಕ್‌ ಗಡುವು 6 ತಿಂಗಳು ವಿಸ್ತರಣೆ; ಸೆಪ್ಟೆಂಬರ್‌ 30ರವರೆಗೆ ಕಾಲಾವಕಾಶ
ಆಧಾರ್‌ ಜೊತೆ ಪ್ಯಾನ್‌ ಜೋಡಣೆ ಮಾಡುವ ತನಕ ತೆರಿಗೆ, ಬ್ಯಾಂಕಿಂಗ್‌, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಆಧಾರ್‌ ಪ್ಯಾನ್‌ ಲಿಂಕ್‌
ಹೊಸದಿಲ್ಲಿ: ಆಧಾರ್‌ ಜೊತೆ ಪ್ಯಾನ್‌ ಅನ್ನು ಜೋಡಣೆ ಮಾಡುವ ಗಡುವನ್ನು ಕೇಂದ್ರ ಸರಕಾರ ಮತ್ತೆ ವಿಸ್ತರಣೆ ಮಾಡಿದೆ.
ಈ ಮೊದಲು ಆದಾಯ ತೆರಿಗೆ ಇಲಾಖೆಯು ಮಾಧ್ಯಮಗಳಿಗೆ ನೀಡಿರುವ ಜಾಹೀರಾತಿನಲ್ಲಿ ಸೂಚಿಸಿದಂತೆ ಮಾರ್ಚ್‌ 31ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಿಸಬೇಕಾಗಿತ್ತು.
ಈಗ ಈ ಗಡುವನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸಲಾಗಿದೆ.
ಆಧಾರ್‌ ಜೊತೆ ಪ್ಯಾನ್‌ ಜೋಡಣೆ ಮಾಡುವ ತನಕ ತೆರಿಗೆ, ಬ್ಯಾಂಕಿಂಗ್‌, ಹಣಕಾಸು ವ್ಯವಹಾರಗಳಿಗೆ ತೊಡಕಾಗುವ ಅವಕಾಶಗಳಿವೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಈ ಮೊದಲು ಪ್ಯಾನ್‌-ಆಧಾರ್‌ ಜೋಡಣೆಗೆ 2018ರ ಜೂ.30 ಕಡೆಯ ದಿನವಾಗಿತ್ತು. ನಂತರ ಇದನ್ನು ಹಲವು ಬಾರಿ ವಿಸ್ತರಿಸಿ ಕೊನೆಗೆ 2019ರ ಮಾರ್ಚ್‌ 31 ರೊಳಗೆ ಆಧಾರ್‌-ಪ್ಯಾನ್‌ ಕಾರ್ಡ್ ಲಿಂಕ್‌ ಮಾಡಿಸಿಕೊಳ್ಳಲು ಸೂಚಿಸಲಾಗಿತ್ತು. ಈಗ ಮತ್ತೆ ಅದನ್ನು ವಿಸ್ತರಣೆ ಮಾಡಲಾಗಿದೆ.
ಈಗಾಗಲೇ ಲಿಂಕ್‌ ಆಗಿದೆಯೇ, ತಿಳಿಯುವುದು ಹೇಗೆ?
ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಈಗಾಗಲೇ ಲಿಂಕ್‌ ಆಗಿವೆಯೇ? ಈ ಮೊದಲು ಇವುಗಳ ಜೋಡಣೆಗೆ 2018ರ ಜೂನ್‌ 30 ಕಡೆಯ ದಿನವಾಗಿತ್ತು. ಆ ಸಂದರ್ಭದಲ್ಲಿ ಏನಾದರೂ ಲಿಂಕ್‌ ಮಾಡಿರಬಹುದಾ ಎನ್ನುವ ಅನುಮಾನ ನಿಮ್ಮಲ್ಲಿರಬಹುದು. ಒಂದು ವೇಳೆ ಮಾಡಿರುವ ನೆನಪೂ ಇರಬಹುದು. ಈ ಬಗ್ಗೆ ದೃಢೀಕರಿಸಿಕೊಳ್ಳಲು ಹೀಗೆ ಮಾಡಿ...
1. ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ: https://www.incometaxindiaefiling.gov.in/
2. ವೆಬ್‌ಸೈಟ್‌ನ ಹೋಮ್‌ಪೇಜ್‌ನ ಎಡಭಾಗದಲ್ಲಿರುವ Link Aadhaar ಎನ್ನುವುದನ್ನು ಕ್ಲಿಕ್‌ ಮಾಡಿ. ಆ ಪುಟದಲ್ಲಿ 'ನೀವು ಈಗಾಗಲೇ ಲಿಂಕ್‌ ಮಾಡಿದ್ದರೆ, ಅದನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ' ಎನ್ನುವರ್ಥದ ಸಂದೇಶ ಕಾಣಿಸುತ್ತದೆ. ಅಲ್ಲಿರುವ Link Aadhaar ಅನ್ನುವುದನ್ನು ಕ್ಲಿಕ್‌ ಮಾಡಿ.
3. ನಿಮ್ಮ ಪ್ಯಾನ್‌ ಮತ್ತು ಆಧಾರ್‌ ಸಂಖ್ಯೆಯನ್ನು ಅಲ್ಲಿ ಕೊಟ್ಟಿರುವ ಖಾಲಿ ಬಾಕ್ಸ್‌ಗಳಲ್ಲಿ ಭರ್ತಿ ಮಾಡಿ. View Link Aadhaar Status ಅನ್ನುವುದನ್ನು ಕ್ಲಿಕ್‌ ಮಾಡಿ. ಆಗ ನಿಮ್ಮ ಕಾರ್ಡ್‌ ಲಿಂಕ್‌ ಆಗಿದೆಯೇ ಅಥವಾ ಇಲ್ಲವೇ ಎನ್ನುವ ಸಂದೇಶವು ತೆರೆ ಮೇಲೆ ಕಾಣಿಸುತ್ತದೆ.

ಬಡವರ ಬೆಳಕು ಸಂಘದಿಂದ ಧನಸಾಹಯ

ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ ನಿಷ್ಕ್ರಿಯೆಗೊಂಡ ವ್ಯಕ್ತಿ ೬೦ ಸಾವಿರ ರೂ ಧನಸಹಾಯ
ಕುಶಾಲನಗರ, ಮಾ೩೧:  ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ‌ ನಿಷ್ಕ್ರಿಯೆಗೊಂಡ ಬಡ ವ್ಯಕ್ತಿಗೆ ೬೦ ಸಾವಿರ ರೂ ಧನಸಹಾಯ ಮಾಡಿ ಬಡ ಕುಟುಂಬಕ್ಕೆ ಬೆಳಕನ್ನು ಚೆಲ್ಲಿದ್ದಾರೆ. ಕೊಡಗು ಬಡವರ ಬೆಳಕು ಸಂಘವು ಕೊಡಗಿನಲ್ಲಿರುವ ಬಡವರ ಆಶಾಕಿರಣವಾಗಿದ್ದು,  ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ.  ಕೊಡಗು ಬಡವರ ಬೆಳಕು ಸಂಘವು ತನ್ನ ಎರಡೂ ಕಿಡ್ನಿಯನ್ನು ಕಳೆದುಕೊಂಡ ಕೊಂಡಂಗೇರಿಯ ಮೂಸಾ ಎಂಬ ಬಡ ಕುಟುಂಬದ ವ್ಯಕ್ತಿಗೆ ಧನಸಹಾಯ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ಭವಿಷ್ಯಕ್ಕಾಗಿ ಸಹಾಯವಾಗಲೆಂದು ಅರವತ್ತು ಸಾವಿರ ರೂಪಾಯಿಗಳ ಸಹಾಯ ಧನವನ್ನು ನೀಡಿದ ಕೊಡಗು ಬಡವರ ಬೆಳಕು ಸಂಘವು,  ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ.
ಬಡ ಕುಟುಂಬವೊಂದಕ್ಕೆ  ಸುಮಾರು ಐದು ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿ ಕೊಡಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದರ ಶಂಕುಸ್ಥಾಪನೆ ನಡೆಯಲಿರುವುದಾಗಿ ಕೊಡಗು ಬಡವರ ಬೆಳಕು ಸಂಘದ ಅಧ್ಯಕ್ಷ ಎಂ.ಹೆಚ್.ಮುಹಮ್ಮದ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗಿನ ಬಡವರ ಬೆಳಕು ಸಂಘದ ಉಪಾಧ್ಯಕ್ಷರಾದ ಫತಾಹ್ ಕಡಂಗ, ಕಾರ್ಯಾಧ್ಯಕ್ಷರಾದ ಮಜೀದ್ ಚೋಕಂಡಲ್ಲಿ, ಪ್ರಧಾನ ಕಾರ್ಯದರ್ಶಿಗಳಾದ ನಾಸೀರ್ ಮಕ್ಕಿ, ಕಾರ್ಯದರ್ಶಿಗಳಾದ ನೌಶಾದ್ ಜನ್ನತ್, ಸಹ ಕಾರ್ಯದರ್ಶಿ ಶಫೀಕ್ ಗುಂಡಿಗೆರೆ, ಖಜಾಂಜಿ ಶಫೀಕ್ ಸಿ.ಎಚ್,  ನಿರ್ದೇಶಕರುಗಳಾದ ಮಜೀದ್ ಕೊಂಡಂಕೇರಿ, ನಾಸೀರ್ ಹುಂಡಿ, ಜಲೀಲ್ ಅಮ್ಮತಿ, ನಜೀರ್ ಚಾಮಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಬಡವರ ಬೆಳಕು ಸಂಘದಿಂದ ಧನಸಾಹಯ

ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ ನಿಷ್ಕ್ರಿಯೆಗೊಂಡ ವ್ಯಕ್ತಿ ೬೦ ಸಾವಿರ ರೂ ಧನಸಹಾಯ
ಕುಶಾಲನಗರ, ಮಾ೩೧:  ಕೊಡಗಿನ ಬಡವರ ಬೆಳಕು ಸಂಘದ ವತಿಯಿಂದ ಕಿಡ್ನಿ‌ ನಿಷ್ಕ್ರಿಯೆಗೊಂಡ ಬಡ ವ್ಯಕ್ತಿಗೆ ೬೦ ಸಾವಿರ ರೂ ಧನಸಹಾಯ ಮಾಡಿ ಬಡ ಕುಟುಂಬಕ್ಕೆ ಬೆಳಕನ್ನು ಚೆಲ್ಲಿದ್ದಾರೆ. ಕೊಡಗು ಬಡವರ ಬೆಳಕು ಸಂಘವು ಕೊಡಗಿನಲ್ಲಿರುವ ಬಡವರ ಆಶಾಕಿರಣವಾಗಿದ್ದು,  ಹಲವಾರು ಜನಪ್ರಿಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದೆ.  ಕೊಡಗು ಬಡವರ ಬೆಳಕು ಸಂಘವು ತನ್ನ ಎರಡೂ ಕಿಡ್ನಿಯನ್ನು ಕಳೆದುಕೊಂಡ ಕೊಂಡಂಗೇರಿಯ ಮೂಸಾ ಎಂಬ ಬಡ ಕುಟುಂಬದ ವ್ಯಕ್ತಿಗೆ ಧನಸಹಾಯ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ಭವಿಷ್ಯಕ್ಕಾಗಿ ಸಹಾಯವಾಗಲೆಂದು ಅರವತ್ತು ಸಾವಿರ ರೂಪಾಯಿಗಳ ಸಹಾಯ ಧನವನ್ನು ನೀಡಿದ ಕೊಡಗು ಬಡವರ ಬೆಳಕು ಸಂಘವು,  ಹಲವಾರು ಜನಪರ ಯೋಜನೆಗಳನ್ನು ಹಮ್ಮಿಕೊಂಡಿದೆ.
ಬಡ ಕುಟುಂಬವೊಂದಕ್ಕೆ  ಸುಮಾರು ಐದು ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿ ಕೊಡಬೇಕೆಂಬ ಯೋಜನೆಯನ್ನು ಹಾಕಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಅದರ ಶಂಕುಸ್ಥಾಪನೆ ನಡೆಯಲಿರುವುದಾಗಿ ಕೊಡಗು ಬಡವರ ಬೆಳಕು ಸಂಘದ ಅಧ್ಯಕ್ಷ ಎಂ.ಹೆಚ್.ಮುಹಮ್ಮದ್ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗಿನ ಬಡವರ ಬೆಳಕು ಸಂಘದ ಉಪಾಧ್ಯಕ್ಷರಾದ ಫತಾಹ್ ಕಡಂಗ, ಕಾರ್ಯಾಧ್ಯಕ್ಷರಾದ ಮಜೀದ್ ಚೋಕಂಡಲ್ಲಿ, ಪ್ರಧಾನ ಕಾರ್ಯದರ್ಶಿಗಳಾದ ನಾಸೀರ್ ಮಕ್ಕಿ, ಕಾರ್ಯದರ್ಶಿಗಳಾದ ನೌಶಾದ್ ಜನ್ನತ್, ಸಹ ಕಾರ್ಯದರ್ಶಿ ಶಫೀಕ್ ಗುಂಡಿಗೆರೆ, ಖಜಾಂಜಿ ಶಫೀಕ್ ಸಿ.ಎಚ್,  ನಿರ್ದೇಶಕರುಗಳಾದ ಮಜೀದ್ ಕೊಂಡಂಕೇರಿ, ನಾಸೀರ್ ಹುಂಡಿ, ಜಲೀಲ್ ಅಮ್ಮತಿ, ನಜೀರ್ ಚಾಮಿ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಭೀಕರ ಅಪಘಾತ ಇಬ್ಬರು ಯುವಕರು ಸಾವು...


ಸುಂಟಿಕೊಪ್ಪ; ಲಾರಿ-ಕಾರು ಡಿಕ್ಕಿ. ಇಬ್ಬರು ಸಾವು
ಸುಂಟಿಕೊಪ್ಪ;  ಸಮೀಪದ ಕೊಡಗರಹಳ್ಳಿಯ ಮಾರುತಿ ನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ಮಿಶ್ರಣ ಲಾರಿ ಮತ್ತು ಪಿಯೆಟ್ ಕಾರಿನ ನಡುವೆ ಡಿಕ್ಕಿ ಸಂಭವಿಸಿ‌ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ.
ಕೊಡಗರಹಳ್ಳಿ ಉಪ್ಪುತೋಡುವಿನ‌ ಇರ್ಫಾನ್ ಸ್ಥಳದಲ್ಲಿ ಮೃತಪಟ್ಟರೇ,ಗಂಭೀರವಾಗಿ ಗಾಯಗೊಂಡಿದ್ದ  ಅಬ್ದುಲ್ ಸಮ್ಮದ್ ಮೈಸೂರಿಗೆ ಸಾಗಿಸುವಷ್ಟರಲ್ಲಿ‌ ದಾರಿಮದ್ಯೆ ಮೃತಪಟ್ಟಿದ್ದಾರೆ.

ಘಟನೆ ವಿವರ; ಸುಂಟಿಕೊಪ್ಪದಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಕಾಂಕ್ರಿಟ್ ಮಿಕ್ಸಿಂಗ್ ಲಾರಿ ಮತ್ತು ಕುಶಾಲನಗರ ಕಡೆಯಿಂದ ಕೊಡಗರಹಳ್ಳಿ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿತ್ತು.ಕಾರಿನಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಯುವಕರನ್ನು ಸಾರ್ವಜನಿಕರು ಶ್ರಮವಹಿಸಿ ಎಳೆದು‌ ಆಸ್ಪತ್ತೆಗೆ ಸಾಗಿಸಿದರು.

ಮತ್ತೊಮ್ಮೆ ಮೋದಿ ಸರ್ಕಾರ :ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಶ್ವಾಸ


ದೇಶದಲ್ಲಿ ಮತ್ತೊಮೆ ಮೋದಿ ಸರ್ಕಾರ:ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿಶ್ವಾಸ.
ಮಡಿಕೇರಿ:  ಕಳೆದ ಐದು ವರ್ಷಗಳಲ್ಲಿ ನರೇಂದ್ರ ಮೋದಿ ನೇತೃತ್ವ ಬಿಜೆಪಿ ಸರ್ಕಾರ ಸಾಕಷ್ಟು ಅಭಿವೃದ್ಧಿ ಮಾಡಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನಿ ಆಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
 ಕೊಡಗು ಜಿಲ್ಲೆಯ ಗೋಣಿಕೊಪ್ಪದಲ್ಲಿ ಬಿಜೆಪಿ ಏರ್ಪಡಿಸಿದ್ದ  ಬೃಹತ್  ಪ್ರಚಾರ ಕಾರ್ಯದಲ್ಲಿ ಪಾಳ್ಗೊಂಡು  ಅವರು ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರಸ್ಪರ ಜಗಳದಲ್ಲಿ ತೊಡಗಿದೆ.
ರಾಜ್ಯದ ಭ್ರಷ್ಟ ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆಯುತ್ತಿದೆ.ಆದರೆ ಭ್ರಷ್ಟ ಗುತ್ತಿಗೆದಾರರ ಪರ ನಿಂತು ಸರ್ಕಾರ ಧರಣಿ ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಕಳೆದ ಐದು ವರ್ಷದಲ್ಲಿ ೦೯ ಕೋಟಿ ಶೌಚಾಲಯ ನಿರ್ಮಾಣವಾಗಿದೆ.ಕರ್ನಾಟಕದಲ್ಲಿ ೪೫ ಲಕ್ಷ ಕುಟುಂಬಗಳು ಈ ಪ್ರಯೋಜನ ಪಡೆದುಕೊಂಡಿದೆ.
ಐದು ವರ್ಷದಲ್ಲಿ ‌ಮೋದಿ ಸರ್ಕಾರ ಅನೇಕ ಸಾಧನೆ ಮಾಡಿದೆ ಎಂದರು.
೦೫ ವರ್ಷದಲ್ಲಿ ಒಬ್ಬ ವ್ಯಕ್ತಿಯಿಂದ ಇದು ಸಾಧ್ಯವಾಗೋದಾದ್ರೆ, ಆದ್ರೆ ತಲಾತಲಾಂತರಗಳಿಂದ ದೇಶ ಆಳಿದ ಗಾಂಧಿ ವಾದ್ರಾ ಕುಟುಂಬ ಯಾಕೆ ಮಾಡಲಿಲ್ಲಿ.
ಕಾಂಗ್ರೆಸ್ ಪಕ್ಷಕ್ಕೆ ದೇಶದ ಅಭಿವೃದ್ಧಿ ಆಗೋದು ಬೇಕಾಗಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ದ ಕಿಡಿಕಾರಿದರು.
ದೇಶದ ಜನರು ನಮ್ಮ ಮುಂದೆ ಕೈಯೊಡ್ಡಿ ನಿಲ್ಲಬೇಕು ಅನ್ನೋದು ಆ ಪಕ್ಷ ಬಯಸಿತ್ತು ಎಂದರು.
ಅಲ್ಲದೇ ಕೊಡಗು -ಮೈಸೂರು ಕ್ಷೇತ್ರದಲ್ಲಿ ಸಂಸದರಾದ ಪ್ರತಾಪ್ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಅಲ್ಲದೇ ಕೇಂದ್ರ ಸರ್ಕಾರದ ಯೋಜನೆಯನ್ನು ಕ್ಷೇತ್ರದ ಪ್ರತಿಯೊಬ್ಬರ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರೆ ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಸಂಸದರಾದ ಪ್ರತಾಪ್ ಸಿಂಹ, ಕ್ಷೇತ್ರದ ಶಾಸಕರಾದ  ಬೋಪಯ್ಯ,ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ಭಾರತೀಶ್ , ರವಿ ಕುಶಾಲಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಬಿ.ಎ ಹರೀಶ್, ಇದ್ದರು..

ಕೇರಳದ ವಯನಾಡಿನಿಂದ ಕಾಂಗ್ರೆಸ್ ಅಧ್ಯಜ್ಷ ರಾಹುಲ್ ಗಾಂಧಿ ‌ಸ್ಪರ್ಧೆ

ಹೊಸದಿಲ್ಲಿ, ಮಾ.31: ಕಾಂಗ್ರೆಸ್  ಅಧ್ಯಕ್ಷ ರಾಹುಲ್ ಗಾಂಧಿ  ಕೇರಳದ ವಯನಾಡ್ ನಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ .

ಅಮೇಠಿಯಲ್ಲಿ ಸ್ಪರ್ಧಿಸಲಿರುವ ರಾಹುಲ್ ಗಾಂಧಿ ಅವರು ತನ್ನ ಎರಡನೇ ಕ್ಷೇತ್ರವಾಗಿ ವಯನಾಡನ್ನು ಆಯ್ದುಕೊಂಡಿದ್ದಾರೆ.

ರಾಹುಲ್ ಗಾಂಧಿ   ವಯನಾಡ್ ನಿಂದ ಸ್ಪರ್ಧಿಸುವ ಬಗ್ಗೆ ಒಪ್ಪಿಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಎ.ಕೆ. ಆ್ಯಂಟನಿ ಇಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿ

ಮಂಡ್ಯದಲ್ಲಿ ಸುಮಲತಾ ಗೆದ್ದರೆ ಅರ್ಧ ಶತಮಾನದ ದಾಖಲೆ ಉಡೀಸ್


*ಮಂಡ್ಯದಲ್ಲಿ ಸುಮಲತಾ ಗೆದ್ದರೆ:ಅರ್ಧ ಶತಮಾನದ ದಾಖಲೆ ಉಡೀಸ್...*
*ರಾಜ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಜಯಿಸಿದ್ದು ೧೯೬೭ ರಲ್ಲಿ*
*ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಸಕ್ಕರೆ ನಾಡಿನ ಪೊಲಿಟಿಕ್ಸ್*
: *ಕೆ‌.ಎಂ ಇಸ್ಮಾಯಿಲ್ ಕಂಡಕರೆ*
ಕೊಡಗು:ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಮೊದಲನೇ ಹಂತದ ಚುನಾವಣೆಯು ಏಪ್ರಿಲ್ ೧೮ ಹಾಗೂ ಎರಡನೇ ಹಂತದ ಮತದಾನವು ೨೩ ಕ್ಕೆ ನಡೆಯಲಿದೆ.ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣೆಯು ಮೊದಲ ಹಂತದ ನಡೆಯಲಿದೆ.
ರಾಜ್ಯಾದ್ಯಂತ ಬಾರೀ ಕುತೂಹಲ ಕೆರಳಿಸಿರುವ "ಸಕ್ಕರೆ ನಾಡು" ಮಂಡ್ಯ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಮೈತ್ರಿ ಅಭ್ಯರ್ಥಿಯಾಗಿ ಗೌಡರ ಕುಟುಂಬದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕಣದಲ್ಲಿದ್ದಾರೆ.
ಭಾರತರ ಜನಾತಾ ಪಕ್ಷವು ಮೈತ್ರಿ ಪಾಳಯಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಬೇಷರತ್ ಬೆಂಬಲ ಘೋಷಿಸಿದೆ.
ಇಡೀ ರಾಜ್ಯದ ಕಣ್ಣು ಮಂಡ್ಯದತ್ತವಾಲಿದೆ.ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನನ್ನು ಸಂಸದಾನಾಗಿ ಮಾಡಲು ಪಣತೊಟ್ಟು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.
ಏತನ್ಮಧ್ಯೆ ಪಕ್ಷೇತರಾರಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಇಡೀ ಚಿತ್ರ ತಂಡ ಬೆನ್ನಿಗೆ ನಿಂತು ಕಾಲಿಗೆ ಚಕ್ರ ಕಟ್ಟಿದಂತೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ಸುಮಲತಾ ಪರ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ವಹಿಸಿದ್ದರೆ, ಇವರಿಗೆ ಸಾಥ್ ನೀಡುತ್ತಿದ್ದಾರೆ ಕೆ.ಜಿ‌.ಎಫ್‌ ಸ್ಟಾರ್ ಯಶ್.
ಅಲ್ಲದೇ ರೈತ ಸಂಘವು ಸುಮಲತಾಗೆ ಬೆಂಬಲ ಘೋಷಿಸಿದೆ.
ಮಂಡ್ಯ ಕ್ಷೇತ್ರದ ಚುನಾವಣೆ ಕಾವು  ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಪರ ವಿರೋಧ ವಾಕ್ಸಮರಗಳು ತಾರಕಕ್ಕೇರಿದೆ.
ಏತನ್ಮಧ್ಯೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಜಯಿಸಿದರೆ ೫೨ ವರ್ಷಗಳಲ್ಲಿ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ದಾಖಲೆ ಬರೆಯಲಿದ್ದಾರೆ.
*೧೯೬೭ರಲ್ಲಿ ಕೊನೇ ಸಂಸದ*
ಸ್ವತಂತ್ರ ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ನೋಂದಾಯಿತ ಪಕ್ಷಗಳ ಜತೆಗೆ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದು ಜಯಿಸಿರುವ ಇತಿಹಾಸವಿದೆ.
ಆದರೆ ಕರ್ಣಾಟಕದ ಮಟ್ಟಿಗೆ ಸ್ವತಂತ್ರ ಅಭ್ಯರ್ಥಿಗಳು ಎಂದರೆ ಅಷ್ಟಕಷ್ಟೆ.
ಭಾರತದ ಸಂವಿಧಾನ ರಚನೆ ನಂತರ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ (೧೯೫೭) ಮೈಸೂರು ರಾಜ್ಯದ ಮೊದಲ ಸ್ವತಂತ್ರ ಅಭ್ಯರ್ಥಿಯಾಗಿ ಬಿಜಾಪುರ ಉತ್ತರದಿಂದ ಸುಗಂಧಿ ಮುರುಗೆಪ್ಪ ಸಿದ್ದಪ್ಪ ಜಯಿಸಿದ್ದರು.
ನಂತರ ೧೯೬೭ ರಲ್ಲಿ ನಡೆದ ಸಸಾರ್ವತ್ರಿಕ ಚುನಾವಣೆಯಲ್ಲಿ ಕೆನಾರಾ ಕ್ಷೇತ್ರದಿಂದ ದಿನಕರ ದೇಸಾಯಿ ಸಂಸದರಾಗಿದ್ದರು.
ಅಲ್ಲಿಂದೀಚೆಗೆ ರಾಜ್ಯದಲ್ಲಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದಿಲ್ಲ.
ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪರೋಕ್ಷವಾಗಿ ಬೆನ್ನಿಗೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷ ಬೆಂಬಲ ಘೋಷಿಸಿದೆ.ಸುಮಲತಾ ಪರ ಬಿಜೆಪಿ ಪ್ರಚಾರಕ್ಕಿಳಿಯಲಿದೆ ಎಂದು ಸ್ವತಃ ಯಡಿಯೂರಪ್ಪರವರು ಇತ್ತೀಚೆಗೆ ಘೋಷಿಸಿದ್ದಾರೆ.
ಇನ್ನೂ ಅಂಬಿ ಮೇಲಿನ ಗೌರವದಿಂದ ಇಡೀ ಚಿತ್ರ ತಂಡವೇ ಸುಮಲತಾ ಹೆಗಲಿಗೆ ,ಹೆಗಲು ಕೊಟ್ಟು  ನಿಂತಿದ್ದಾರೆ.
ಇದೆಲ್ಲದರ ನಡುವೆ ಮಂಡ್ಯ  ಜಿಲ್ಲೆಯಲ್ಲಿ ಪ್ರಬಲವಾಗಿರುವ ತೆನೆ ಪಕ್ಷಕ್ಕೆ ಪೈಪೋಟಿ ನೀಡುವುದು ಖಚಿತವಾಗಿದೆ.
ಅನುಕಂಪದ ಅಲೆಯಲ್ಲಿ ಗೌಡರ ಕುಟುಂಬದ ಎದುರು ಅಂಬರೀಶ್ ಕುಟುಂಬ ಜಯಿಸಿದ್ದೆ ಆದರೆ, ಮೈಸೂರು ರಾಜ್ಯ ಎಂದಿದ್ದ ಹೆಸರು ಕರ್ನಾಟಕ ಎಂದು ನಾಮಕರಣವಾದ ನಂತರ ರಾಜ್ಯದಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಹೆಗ್ಗಳಿಕೆ ಸುಮಲತಾ ಅಂಬರೀಶ್ ಹೆಗಲೇರಲಿದೆ.
*ಬಾಕ್ಸ್*
*೨೦೧೪ ರಲ್ಲಿ ರಾಜ್ಯದಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು*
೨೦೧೪ ರಲ್ಲಿ ದೇಶಾದ್ಯಂತ ಸ್ಪರ್ಧಿಸಿದ್ದ ೩,೨೩೪ ಸ್ವತಂತ್ರ ಅಭ್ಯರ್ಥಿಗಳ ಪೈಕಿ ೩,೨೧೮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ, ಜಯಿಸಿದ್ದು ಕೇವಲ ಮೂವರು. ಒಟ್ಟಾರೆ ದೇಶದಲ್ಲಿ ಚಲಾವಣೆಯಾದ ಮತಗಳ ಪೈಕಿ ಸ್ವತಂತ್ರ ಅಭ್ಯರ್ಥಿಗಳು ಪಡೆದಿದ್ದು  ಕೇವಲ ಶೇ. ೦.೪೫ , ರಾಜ್ಯದಲ್ಲಿ ೨೦೧೪ ರಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿ ೪:೮೩ ಲಕ್ಷ  ಶೇ (೧.೫೭)
ಮತ ಗಳಿಸಿದ್ದರು.ಯಾರೊಬ್ಬರೂ ಗೆಲ್ಲಲಿಲ್ಲ.
ಆದರೆ ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತಗಳಿಂದ ಇತರೆ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
*ಬಾಕ್ಸ್*
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರರು
ಚುನಾವಣೆ ವರ್ಷ:ರಾಜ್ಯಗಳು: 
೧೯೫೧                ೧೧.   ಜಯಿಸಿದ್ದವರು:೩೭
ವರ್ಷ:ರಾಜ್ಯ:ಜಯಿಸಿದವರು
೧೯೫೭: ೧೧: ಜಯಿಸಿದವರು:೪೨
ವರ್ಷ: ರಾಜ್ಯ:ಜಯಿಸಿದವರು
೧೯೬೨:೦೭:  ೨೦
೧೯೬೭:೧೬: ೩೫
೧೯೭೧:೦೯:೧೪
೧೯೭೭:೦೯:೦೯
೧೯೮೦;೦೦:೦೯
೧೯೮೪:೦೫:೦೫
೧೯೮೯:೦೦-೧೨
೧೯೯೧:೦೧-೦೧
೧೯೯೬:೦೮-೦೯
೧೯೯೯;.೦೬:೦೬
೨೦೦೪:೦೫:೦೫
೨೦೦೯:೦೭:೦೯
೨೦೧೪:೨:೦೩*ಮಂಡ್ಯದಲ್ಲಿ ಸುಮಲತಾ ಗೆದ್ದರೆ:ಅರ್ಧ ಶತಮಾನದ ದಾಖಲೆ ಉಡೀಸ್...*
*ರಾಜ್ಯದಲ್ಲಿ ಸ್ವತಂತ್ರ ಅಭ್ಯರ್ಥಿ ಜಯಿಸಿದ್ದು ೧೯೬೭ ರಲ್ಲಿ*
*ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ ಸಕ್ಕರೆ ನಾಡಿನ ಪೊಲಿಟಿಕ್ಸ್*
: *ಕೆ‌.ಎಂ ಇಸ್ಮಾಯಿಲ್ ಕಂಡಕರೆ* (ಕೊಡಗು*)
ಕೊಡಗು:ಲೋಕಸಭಾ ಚುನಾವಣೆಯು ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ.
ಮೊದಲನೇ ಹಂತದ ಚುನಾವಣೆಯು ಏಪ್ರಿಲ್ ೧೮ ಹಾಗೂ ಎರಡನೇ ಹಂತದ ಮತದಾನವು ೨೩ ಕ್ಕೆ ನಡೆಯಲಿದೆ.ಸಕ್ಕರೆ ನಾಡು ಮಂಡ್ಯ ಲೋಕಸಭಾ ಚುನಾವಣೆಯು ಮೊದಲ ಹಂರದ ನಡೆಯಲಿದೆ.
ರಾಜ್ಯಾದ್ಯಂತ ಬಾರೀ ಕುತೂಹಲ ಕೆರಳಿಸಿರುವ "ಸಕ್ಕರೆ ನಾಡು" ಮಂಡ್ಯ ರಾಜಕೀಯ ದಿನದಿಂದ ದಿನಕ್ಕೆ ರಂಗೇರುತ್ತಿದೆ.
ಮೈತ್ರಿ ಅಭ್ಯರ್ಥಿಯಾಗಿ ಗೌಡರ ಕುಟುಂಬದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಕಣದಲ್ಲಿದ್ದಾರೆ.
ಭಾರತರ ಜನಾತಾ ಪಕ್ಷವು ಮೈತ್ರಿ ಪಾಳಯಕ್ಕೆ ಸೆಡ್ಡು ಹೊಡೆದು ಪಕ್ಷೇತರರಾಗಿ ಅಖಾಡಕ್ಕಿಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಬೇಷರತ್ ಬೆಂಬಲ ಘೋಷಿಸಿದೆ.
ಇಡೀ ರಾಜ್ಯದ ಕಣ್ಣು ಮಂಡ್ಯದತ್ತವಾಲಿದೆ.ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗನನ್ನು ಸಂಸದಾನಾಗಿ ಮಾಡಲು ಪಣತೊಟ್ಟು ಕ್ಷೇತ್ರದಲ್ಲೇ ಠಿಕಾಣಿ ಹೂಡಿದ್ದಾರೆ.
ಏತನ್ಮಧ್ಯೆ ಪಕ್ಷೇತರಾರಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಶ್ ಅವರಿಗೆ ಇಡೀ ಚಿತ್ರ ತಂಡ ಬೆನ್ನಿಗೆ ನಿಂತು ಕಾಲಿಗೆ ಚಕ್ರ ಕಟ್ಟಿದಂತೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ಸುಮಲತಾ ಪರ ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಚಾಲೆಂಜಿಗ್ ಸ್ಟಾರ್ ದರ್ಶನ್ ವಹಿಸಿದ್ದರೆ, ಇವರಿಗೆ ಸಾಥ್ ನೀಡುತ್ತಿದ್ದಾರೆ ಕೆ.ಜಿ‌.ಎಫ್‌ ಸ್ಟಾರ್ ಯಶ್.
ಅಲ್ಲದೇ ರೈತ ಸಂಘವು ಸುಮಲತಾಗೆ ಬೆಂಬಲ ಘೋಷಿಸಿದೆ.
ಮಂಡ್ಯ ಕ್ಷೇತ್ರದ ಚುನಾವಣೆ ಕಾವು  ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಪರ ವಿರೋಧ ವಾಕ್ಸಮರಗಳು ತಾರಕಕ್ಕೇರಿದೆ.
ಏತನ್ಮಧ್ಯೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಮಲತಾ ಅಂಬರೀಶ್ ಜಯಿಸಿದರೆ ೫೨ ವರ್ಷಗಳಲ್ಲಿ ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ದಾಖಲೆ ಬರೆಯಲಿದ್ದಾರೆ.
*೧೯೬೭ರಲ್ಲಿ ಕೊನೇ ಸಂಸದ*
ಸ್ವತಂತ್ರ ಭಾರತದಲ್ಲಿ ವಿವಿಧ ರಾಜ್ಯಗಳಲ್ಲಿ ನೋಂದಾಯಿತ ಪಕ್ಷಗಳ ಜತೆಗೆ ಸ್ವತಂತ್ರ ಅಭ್ಯರ್ಥಿಗಳು ಕಣಕ್ಕಿಳಿದು ಜಯಿಸಿರುವ ಇತಿಹಾಸವಿದೆ.
ಆದರೆ ಕರ್ಣಾಟಕದ ಮಟ್ಟಿಗೆ ಸ್ವತಂತ್ರ ಅಭ್ಯರ್ಥಿಗಳು ಎಂದರೆ ಅಷ್ಟಕಷ್ಟೆ.
ಭಾರತದ ಸಂವಿಧಾನ ರಚನೆ ನಂತರ ನಡೆದ ಎರಡನೇ ಸಾರ್ವತ್ರಿಕ ಚುನಾವಣೆಯಲ್ಲಿ (೧೯೫೭) ಮೈಸೂರು ರಾಜ್ಯದ ಮೊದಲ ಸ್ವತಂತ್ರ ಅಭ್ಯರ್ಥಿಯಾಗಿ ಬಿಜಾಪುರ ಉತ್ತರದಿಂದ ಸುಗಂಧಿ ಮುರುಗೆಪ್ಪ ಸಿದ್ದಪ್ಪ ಜಯಿಸಿದ್ದರು.
ನಂತರ ೧೯೬೭ ರಲ್ಲಿ ನಡೆದ ಸಸಾರ್ವತ್ರಿಕ ಚುನಾವಣೆಯಲ್ಲಿ ಕೆನಾರಾ ಕ್ಷೇತ್ರದಿಂದ ದಿನಕರ ದೇಸಾಯಿ ಸಂಸದರಾಗಿದ್ದರು.
ಅಲ್ಲಿಂದೀಚೆಗೆ ರಾಜ್ಯದಲ್ಲಿ ಯಾವುದೇ ಸ್ವತಂತ್ರ ಅಭ್ಯರ್ಥಿ ಗೆದ್ದಿಲ್ಲ.
ಸುಮಲತಾ ಅಂಬರೀಶ್ ಸ್ವತಂತ್ರ ಅಭ್ಯರ್ಥಿಯಾಗಿದ್ದರೂ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪರೋಕ್ಷವಾಗಿ ಬೆನ್ನಿಗೆ ನಿಂತು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.
ಬಿಜೆಪಿ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪರೋಕ್ಷ ಬೆಂಬಲ ಘೋಷಿಸಿದೆ.ಸುಮಲತಾ ಪರ ಬಿಜೆಪಿ ಪ್ರಚಾರಕ್ಕಿಳಿಯಲಿದೆ ಎಂದು ಸ್ವತಃ ಯಡಿಯೂರಪ್ಪರವರು ಇತ್ತೀಚೆಗೆ ಘೋಷಿಸಿದ್ದಾರೆ.
ಇನ್ನೂ ಅಂಬಿ ಮೇಲಿನ ಗೌರವದಿಂದ ಇಡೀ ಚಿತ್ರ ತಂಡವೇ ಸುಮಲತಾ ಹೆಗಲಿಗೆ ,ಹೆಗಲು ಕೊಟ್ಟು  ನಿಂತಿದ್ದಾರೆ.
ಇದೆಲ್ಲದರ ನಡುವೆ ಮಂಡ್ಯ  ಜಿಲ್ಲೆಯಲ್ಲಿ ಪ್ರಬಲವಾಗಿರುವ ತೆನೆ ಪಕ್ಷಕ್ಕೆ ಪೈಪೋಟಿ ನೀಡುವುದು ಖಚಿತವಾಗಿದೆ.
ಅನುಕಂಪದ ಅಲೆಯಲ್ಲಿ ಗೌಡರ ಕುಟುಂಬದ ಎದುರು ಅಂಬರೀಶ್ ಕುಟುಂಬ ಜಯಿಸಿದ್ದೆ ಆದರೆ, ಮೈಸೂರು ರಾಜ್ಯ ಎಂದಿದ್ದ ಹೆಸರು ಕರ್ನಾಟಕ ಎಂದು ನಾಮಕರಣವಾದ ನಂತರ ರಾಜ್ಯದಲ್ಲಿ ಜಯಿಸಿದ ಮೊದಲ ಸ್ವತಂತ್ರ ಅಭ್ಯರ್ಥಿ ಎಂಬ ಹೆಗ್ಗಳಿಕೆ ಸುಮಲತಾ ಅಂಬರೀಶ್ ಹೆಗಲೇರಲಿದೆ.
*ಬಾಕ್ಸ್*
*೨೦೧೪ ರಲ್ಲಿ ರಾಜ್ಯದಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು*
೨೦೧೪ ರಲ್ಲಿ ದೇಶಾದ್ಯಂತ ಸ್ಪರ್ಧಿಸಿದ್ದ ೩,೨೩೪ ಸ್ವತಂತ್ರ ಅಭ್ಯರ್ಥಿಗಳ ಪೈಕಿ ೩,೨೧೮ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡರೆ, ಜಯಿಸಿದ್ದು ಕೇವಲ ಮೂವರು. ಒಟ್ಟಾರೆ ದೇಶದಲ್ಲಿ ಚಲಾವಣೆಯಾದ ಮತಗಳ ಪೈಕಿ ಸ್ವತಂತ್ರ ಅಭ್ಯರ್ಥಿಗಳು ಪಡೆದಿದ್ದು  ಕೇವಲ ಶೇ. ೦.೪೫ , ರಾಜ್ಯದಲ್ಲಿ ೨೦೧೪ ರಲ್ಲಿ ೧೯೪ ಸ್ವತಂತ್ರ ಅಭ್ಯರ್ಥಿಗಳು ಸ್ಪರ್ಧಿಸಿ ೪:೮೩ ಲಕ್ಷ  ಶೇ (೧.೫೭)
ಮತ ಗಳಿಸಿದ್ದರು.ಯಾರೊಬ್ಬರೂ ಗೆಲ್ಲಲಿಲ್ಲ.
ಆದರೆ ಸ್ವತಂತ್ರ ಅಭ್ಯರ್ಥಿಗಳು ಪಡೆದ ಮತಗಳಿಂದ ಇತರೆ ಪಕ್ಷದ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.
*ಬಾಕ್ಸ್*
ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರರು
ಚುನಾವಣೆ ವರ್ಷ:ರಾಜ್ಯಗಳು: 
೧೯೫೧                ೧೧.   ಜಯಿಸಿದ್ದವರು:೩೭
ವರ್ಷ:ರಾಜ್ಯ:ಜಯಿಸಿದವರು
೧೯೫೭: ೧೧: ಜಯಿಸಿದವರು:೪೨
ವರ್ಷ: ರಾಜ್ಯ:ಜಯಿಸಿದವರು
೧೯೬೨:೦೭:  ೨೦
೧೯೬೭:೧೬: ೩೫
೧೯೭೧:೦೯:೧೪
೧೯೭೭:೦೯:೦೯
೧೯೮೦;೦೦:೦೯
೧೯೮೪:೦೫:೦೫
೧೯೮೯:೦೦-೧೨
೧೯೯೧:೦೧-೦೧
೧೯೯೬:೦೮-೦೯
೧೯೯೯;.೦೬:೦೬
೨೦೦೪:೦೫:೦೫
೨೦೦೯:೦೭:೦೯
೨೦೧೪:೨:೦೩

ಸೂಪರ್ ಓವರ್ ನಲ್ಲಿ ಗೆಲುವು ಕಂಡ ಡೆಲ್ಲಿ:ಒಂದು ರನ್ ನಿಂದ ಶತಕ ವಂಚಿತರಾದ ಪೃಥ್ವಿ ಶಾ


ಸೂಪರ್ ಓವರ್‌ನಲ್ಲಿ ಕೋಲ್ಕತವನ್ನು ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್
ಹೊಸದಿಲ್ಲಿ, ಮಾ.31: ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ಮಧ್ಯೆ ಶನಿವಾರ ಇಲ್ಲಿ ನಡೆದ ಐಪಿಎಲ್‌ನ 10ನೇ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡಿದೆ. ಅಂತಿಮವಾಗಿ ಸೂಪರ್ ಓವರ್‌ನಲ್ಲಿ ಡೆಲ್ಲಿ ತಂಡ ಗೆಲುವು ಸಾಧಿಸಿದೆ. ಗೆಲುವಿಗೆ 186 ರನ್ ಗುರಿ ಪಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಟಗಾರ ಪೃಥ್ವಿ ಶಾ(99, 55 ಎಸೆತ,12 ಬೌಂಡರಿ, 3 ಸಿಕ್ಸರ್)ಅತ್ಯುತ್ತಮ ಬ್ಯಾಟಿಂಗ್ ಸಾಹಸದಿಂದ 20 ಓವರ್ ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 185 ರನ್ ಗಳಿಸಿ ಪಂದ್ಯವನ್ನು ಟೈ ಗೊಳಿಸಿತು.
ಈ ವರ್ಷದ ಐಪಿಎಲ್‌ನಲ್ಲಿ ಅಳವಡಿಸಿದ ಮೊದಲ ಸೂಪರ್ ಓವರ್ ಇದಾಗಿದೆ.
ಡೆಲ್ಲಿ ಪರ ನಾಯಕ ಶ್ರೇಯಸ್ ಅಯ್ಯರ್ (43) ಹಾಗೂ ಶಿಖರ್ ಧವನ್(16 ರನ್) ಎರಡಂಕೆಯ ಸ್ಕೋರ್ ಗಳಿಸಿದರು. ಇದಕ್ಕೂ ಮೊದಲು ಆಲ್‌ರೌಂಡರ್ ಆ್ಯಂಡ್ರೆ ರಸೆಲ್(62,28 ಎಸೆತ)ಅಬ್ಬರದ ಆಟ ಹಾಗೂ ನಾಯಕ ದಿನೇಶ್ ಕಾರ್ತಿಕ್ ಅರ್ಧಶತಕ(50)ಸಹಾಯದಿಂದ ಕೋಲ್ಕತಾ ತಂಡ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಐಪಿಎಲ್‌ನ 10ನೇ ಪಂದ್ಯ ಗೆಲ್ಲಲು 186 ರನ್ ಗುರಿ ನೀಡಿತು.

ಕೆರೆಗೆ ಬಿದ್ದ ಮರಿಯಾನೆ ರಕ್ಷಣೆ.‌..


ಮಡಿಕೇರಿ : ಪಾಲಂಗಾಲ ಗ್ರಾಮದ ಕಾಫಿ ಬೆಳೆಗಾರರಾದ ಲಲಿತಾ ಎಂಬುವವರ ಕೆರೆಯೊಳಗೆ ಆಯತಪ್ಪಿ ಬಿದ್ದಿದ್ದ ಕಾಡಾನೆಯ ಮರಿಯೊಂದು ಅರಣ್ಯ ಇಲಾಖೆಯ ಸಕಾಲಿಕ ಕ್ರಮದಿಂದಾಗಿ ರಕ್ಷಿಸಲ್ಪಟ್ಟಿದೆ.  ಇಂದು (ತಾ.30) ಮುಂಜಾನೆ ಅಂದಾಜು 8 ವರ್ಷ ಪ್ರಾಯದ ಕಾಡಾನೆಯ ಮರಿಯೊಂದು ಲಲಿತಾರವರು ತೋಡಿಸಿದ್ದ ಹೊಸ ಕೆರೆಯೊಳಗೆ ನಿಯಂತ್ರಣ ಕಳೆದುಕೊಂಡು ಬಿದ್ದಿದೆ.  ನಂತರ ಮೇಲಕ್ಕೆ ಬರಲು ಶತ ಪ್ರಯತ್ನ ನಡೆಸಿದರೂ ಫಲಕಾರಿಯಾಗದೇ ಜೀವನ್ಮರಣದ ನಡುವೆ ಒಯ್ದಾಡತೊಡಗಿದೆ.  8 ಗಂಟೆಯ ನಂತರ ಕೆಲಸಕ್ಕೆಂದು ಬಂದಿದ್ದ ಕಾರ್ಮಿಕರಿಗೆ ಕೆರೆಯಲ್ಲಿ ಸಿಲುಕಿ ಜೀವ ಉಳಿಸಿಕೊಳ್ಳಲು ಯತ್ನಿಸಿ ಹೈರಾಣಾಗಿದ್ದ ಆನೆ ಮರಿ ಕಂಡುಬಂದಿದೆ.  ಕೂಡಲೇ ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದಾರೆ.  ವಿಷಯವರಿತು ಸ್ಥಳಕ್ಕೆ ಧಾವಿಸಿ ಬಂದ ಆರ್.ಎಫ್.ಓ. ಗೋಪಾಲರವರ ನೇತೃತ್ವದ ತಂಡ ಯಶಸ್ವಿ ಕಾರ್ಯಾಚರಣೆ ನಡೆಸಿ ಆನೆ ಮರಿಯನ್ನು ಸುರಕ್ಷಿತವಾಗಿ ಮೇಲಕ್ಕೆತ್ತಿ ಜೀವ ಉಳಿಸಿದ್ದಾರೆ.  ನಂತರ ಅದನ್ನು ಅರಣ್ಯದೊಳಗೆ ಬಿಡಲಾಯಿತು.

ಚುನಾವಣೆ ಪ್ರಚಾರ ವೇಳೆ ಭತ್ತ ನಾಟಿ ಮಾಡಿದ ನಿಖಿಲ್


ಮಂಡ್ಯ : ಕಾಂಗ್ರೆಸ್-
ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಶನಿವಾರ ರೈತ ಮಹಿಳೆಯರೊಂದಿಗೆ ಗದ್ದೆ ನಾಟಿಯಲ್ಲಿ ಪಾಲ್ಗೊಂಡು ಗಮನಸೆಳೆದರು.ತಂದೆ ಕುಮಾರಸ್ವಾಮಿಯಂತೆ ಭತ್ತ ನಾಟಿಗಿಳಿದರು.ಮಂಡ್ಯ ಮದ್ದೂರು ತಾಲೂಕಿನ ಆತಗೂರು ಗ್ರಾಮದಲ್ಲಿ ಪ್ರಚಾರ ನಡೆಸಿ ಸಮೀಪದಲ್ಲೇ ಇದ್ದ ರೈತ ರಾಮಣ್ಣ ಅವರ ಗದ್ದೆಗಿಳಿದು ನಾಟಿ ಮಾಡಿದರು. ಈ ಸಂದರ್ಭದಲ್ಲಿ ಅವರು ' ನಾವು ರೈತರ ಮಕ್ಕಳು, ನಾವು ಗದ್ದೆಗಿಳಿಯದೆ ಇನ್ನಾರು ಇಳಿಯುಹುದು ಎಂದರು

ಹಾಸನ ಜಿಲ್ಲಾಧಿಕಾರಿ ವರ್ಗಾವಣೆ

ಹಾಸನ ಜಿಲ್ಲಾಧಿಕಾರಿ ಅಕ್ರಮ್ ಪಾಷ ವರ್ಗಾವಣೆ

ಬೆಂಗಳೂರು, ಮಾ.30: ಹಾಸನ ಜಿಲ್ಲಾಧಿಕಾರಿ ಅಕ್ರಮ್ ಪಾಷ ಸೇರಿದಂತೆ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ವರ್ಗಾವಣೆ ಮಾಡಿ ಶನಿವಾರ ಆದೇಶ ಹೊರಡಿಸಿದೆ.
ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿಯಾಗಿದ್ದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ರನ್ನು ಹಾಸನ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಕೃಷ್ಣಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನ ಹಾಗೂ ಪುನರ್ವಸತಿ ವಿಭಾಗದ ಆಯುಕ್ತರಾಗಿದ್ದ ಉಜ್ವಲ್ ಕುಮಾರ್ ಘೋಷ್‌ರನ್ನು ಬೆಳಗಾವಿ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆಯಾಗಿದ್ದ ಎಂ.ಕನಗವಲ್ಲಿಯನ್ನು ವಿಜಯಪುರ ಜಿಲ್ಲಾಧಿಕಾರಿಯಾಗಿ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿದೆ.
ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾಗಿದ್ದ ಅಕ್ರಮ್ ಪಾಷರನ್ನು ಇತ್ತೀಚೆಗಷ್ಟೇ ಹಾಸನ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿತ್ತು. ಹಾಸನದ ಬಿಜೆಪಿ ಶಾಸಕ ಪ್ರೀತಂ ಗೌಡ ದೂರಿನ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಅಕ್ರಮ್ ಪಾಷರನ್ನು ವರ್ಗಾವಣೆ ಮಾಡಿದೆ ಎನ್ನಲಾಗಿದೆ.
ಅದೇ ರೀತಿ, ವಿಜಯಪುರ ಜಿಲ್ಲಾಧಿಕಾರಿಯಾಗಿದ್ದ ವೈ.ಎಸ್.ಪಾಟೀಲ್ ಹಾಗೂ ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ವಿರುದ್ಧವು ಪಕ್ಷಪಾತದ ದೂರುಗಳು ಚುನಾವಣಾ ಆಯೋಗಕ್ಕೆ ಸಲ್ಲಿಕೆಯಾದ ಕಾರಣದಿಂದಾಗಿ, ಮೂವರು ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ರಸ್ತೆ ದುರಸ್ತಿಗೆ ಆಗ್ರಹ....


ಬಾಳೆಬಳಪು ಕುಂಡತ್ತಿಕಾನ ಕಾಲೋನಿ ರಸ್ತೆ ದುರಸ್ತಿಗೆ ಆಗ್ರಹ
ಮಡಿಕೇರಿ ಮಾ. ೨೨ :  ಕರಿಕೆ ಗ್ರಾಮದ ಬಾಳೆಬಳಪು ಕುಂಡತ್ತಿಕಾನದ ಪರಿಶಿಷ್ಟರ ಕಾಲೋನಿಗೆ ಹೋಗುವ ರಸ್ತೆಯನ್ನು ದುರಸ್ತಿಪಡಿಸುವಂತೆ ಒತ್ತಾಯಿಸಿರುವ ಸ್ಥಳೀಯ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ದುರ್ಬಲರು ಓಡಾಡುವ ರಸ್ತೆಗೆ ಅಡ್ಡಲಾಗಿ ಕೆಲವು ಪ್ರಭಾವಿಗಳು ಬೇಲಿ ನಿರ್ಮಿಸಿಕೊಂಡಿದ್ದು, ಗ್ರಾಮಸ್ಥರು, ಕೂಲಿಕಾರ್ಮಿಕರು ಹಾಗೂ ವಿದ್ಯಾರ್ಥಿಗಳು ಸೂಕ್ತ ಸಂಪರ್ಕ ರಸ್ತೆ ವ್ಯವಸ್ಥೆಯಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಯಿಂದ ಬೇಲಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದವರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿರುವ ಕಾಲೋನಿ ನಿವಾಸಿಗಳು ಕಂದಾಯ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಗ್ರಾಮಸ್ಥರ ಸಂಚಾರಕ್ಕೆ ಯೋಗ್ಯವಾದ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಪ್ರಮುಖರು ಒತ್ತಾಯಿಸಿದ್ದಾರೆ.
ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಡಿಕೇರಿಯಲ್ಲಿ ಕ್ರಾಫ್ಟ್ ಮೇಳಕ್ಕೆ ಚಾಲನೆ


ಮಡಿಕೇರಿಯಲ್ಲಿ ಕ್ರಾಫ್ಟ್ ಮೇಳಕ್ಕೆ ಸಂಭ್ರಮದ ಚಾಲನೆ : ದಕ್ಷಿಣ ಭಾರತದ ವಿವಿಧ ಕಲಾಪರಿಣಿತರಿಂದ ವೈವಿಧ್ಯಮಯ ಕಲಾಪ್ರಕಾರಗಳ ತರಬೇತಿ
ಮಡಿಕೇರಿ ಮಾ. ೩೦ : ಕೇರಳದ ರೋಮಾಂಚಕಾರಿ ಸಮರ ನ?ತ್ಯವಾದ ಕಲರಿ ಪಯಟ್ ಪ್ರದಶ೯ನದೊಂದಿಗೆ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ಆಯೋಜಿತ ಕ್ರಾಫ್ಟ್ ಮೇಳ -೨೦೧೯ ಕ್ಕೆ ಚಾಲನೆ ದೊರಕಿದೆ.
ಕೊಡಗು ಜಿಲ್ಲೆಯ ವಿವಿಧೆಡೆಗಳ ೮೦೦ ಕ್ಕೂ ಅಧಿಕ ವಿದ್ಯಾಥಿ೯ಗಳಿಗೆ ಕ್ರಾಫ್ಟ್ ಮೇಳದಲ್ಲಿ ದಕ್ಷಿಣ ಭಾರತದ ವಿವಿಧೆಡೆಗಳಿಂದ ಬಂದಿರುವ ವೈವಿಧ್ಯಮಯ ಕಲಾ ತರಬೇತುದಾರರು ತರಬೇತಿ ನೀಡುತ್ತಿದ್ದಾರೆ.
ಕ್ರಾಫ್ಟ್ ಮೇಳ -೨೦೧೯ ನ್ನು ವಿದ್ಯುಕ್ತವಾಗಿ ಸಭಾ ಕಾಯ೯ಕ್ರಮದೊಂದಿಗೆ ಉದ್ಘಾಟಿಸಿದ ಭಾರತೀಯ ವಿದ್ಯಾಭವನ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ, ಕೊಡಗು ಜಿಲ್ಲೆಯ ವಿದ್ಯಾಥಿ೯ಗಳಿಗೆ ದೊರಕಿರುವ ಕಲಾ ತರಬೇತಿಯ ಈ ಸುವಣಾ೯ವಕಾಶದ ಪ್ರಯೋಜನವನ್ನು ಶಿಬಿರದಲ್ಲಿ ಪಾಲ್ಗೊಂಡಿರುವ ವಿದ್ಯಾಥಿ೯ಗಳು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಇತರ ವಿದ್ಯಾಥಿ೯ಗಳಿಗೂ ಮಾಗ೯ದಶ೯ನ ನೀಡಬೇಕೆಂದು ಕರೆ ನೀಡಿದರು. ಇಂಥ ಶಿಬಿರಗಳು ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿಯೂ ಸಹಕಾರಿ ಎಂದೂ ಉತ್ತಪ್ಪ ಶ್ಲಾಘಿಸಿದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಸುಪ್ತಪ್ರತಿಭೆ ಹೊಂದಿರುವ ಗ್ರಾಮೀಣ ಪ್ರದೇಶದ ವಿದ್ಯಾಥಿ೯ಗಳಿಗೆ ಇಂಥ ಕರಕುಶಲ ಕಾಯಾ೯ಗಾರ ಅತ್ಯಂತ ಹೆಚ್ಚು ಉಪಯುಕ್ತವಾಗಿದ್ದು, ಮೊದಲ ಬಾರಿಗೆ ಮಡಿಕೇರಿಯಲ್ಲಿ ಆಯೋಜಿತ ಕಾಯಾ೯ಗಾರಕ್ಕೆ ಅತ್ಯುತ್ತಮ ಸ್ಪಂದನೆ ದೊರಕಿರುವುದು ನಮ್ಮ ಉತ್ಸಾಹ ಇಮ್ಮಡಿಗೊಳಿಸಿದೆ ಎಂದರು. ಅಂತರರಾಷ್ಟ್ರೀಯ ಕಲಾಪರಿಣಿತರು ಸೂಕ್ತ ತರಬೇತಿಯನ್ನು ಮೂರು ದಿನಗಳ ಕಾಲ ನೀಡಲಿದ್ದು. ಕೊಡಗಿನ ಮಕ್ಕಳಿಗೆ ವೈವಿಧ್ಯಮಯ ಕರಕುಶಲ ತರಬೇತಿ ನೀಡಲು ದಕ್ಷಿಣ ಭಾರತದ ಹಲವೆಡೆಗಳಿಂದ ನುರಿತ ಕಲಾವಿದರು ಮಡಿಕೇರಿಗೆ ಬಂದಿರುವುದು ಹೆಮ್ಮೆ ತಂದಿದೆ ಎಂದೂ ದೇವಯ್ಯ ಸಂತೋಷ ವ್ಯಕ್ತಪಡಿಸಿದರು.
ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾಯ೯ದಶಿ೯ ಬಾಲಾಜಿ ಕಶ್ಯಪ್, ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಮುಖ್ಯಕಾಯ೯ನಿವ೯ಹಣಾಧಿಕಾರಿ ವಿದ್ಯಾ ಹರೀಶ್, ಶೈಕ್ಷಣಿಕ ವಿಭಾಗದ ಅಧ್ಯಕ್ಷೆ ಊವ೯ಶಿ ಮುದ್ದಯ್ಯ, ಆಡಳಿತ ಮಂಡಳಿ ಪ್ರಮುಖರಾದ ರಘುಮಾದಪ್ಪ, ಶಾರದಾ ಮಂದಪ್ಪ ವೇದಿಕೆಯಲ್ಲಿದ್ದರು.
ಇದೇ ಸಂದಭ೯ ಕೇರಳದ ಗುರೂವಾಯೂರಿನ ಚೌವ್ಕಾಡ್ ಗ್ರಾಮದ ವಲ್ಲಭಾಟ್ ಕಲಾಕೇಂದ್ರದಿಂದ ಹೆಸರಾಂತ ಸಮರ ನ?ತ್ಯ ಕಲರಿ ಪಯಟ್ ಪ್ರದಶ೯ನ ಕಲಾಪ್ರೇಮಿಗಳನ್ನು ರೋಮಾಂಚನಗೊಳಿಸಿತು.
ತರಬೇತಿ : ಏಪ್ರಿಲ್ ೧ ರ ಸೋಮವಾರದವರೆಗೆ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದಲ್ಲಿ ನಡೆಯುವ ಕ್ಯಾಫ್ಟ್ ಮೇಳದಲ್ಲಿ ವಿವಿಧ ಕಲಾಪ್ರಕಾರಗಳ ಬಗ್ಗೆ ಜಿಲ್ಲೆಯ ಹಲವೆಡೆಗಳಿಂದ ಪಾಲ್ಗೊಂಡಿರುವ ವಿದ್ಯಾಥಿ೯ಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ.
ನೃತ್ಯ ಕಲೆಯ ಬಗ್ಗೆ ಹೆಸರಾಂತ ಅಂತರರಾಷ್ಟ್ರೀಯ ಕಲಾವಿದೆ ವೈಜಯಂತಿ ಕಾಶಿ, ಪ್ರತಿಕ್ಷಾ ಕಾಶಿ, ಯಕ್ಷಗಾನ ಕಲೆಯ ಬಗ್ಗೆ ಹೆಸರಾಂತ ಯಕ್ಷಕಲಾವಿದ ಬೆಂಗಳೂರಿನ ಶ್ರೀನಿವಾಸ್ ಆಸ್ಥಾನ್, ಮಣ್ಣಿನಲ್ಲಿ ರೂಪಿತ ಚೆರಿಯಲ್ ಮುಖವಾಡ ರಚನೆ ಬಗ್ಗೆ ಆಂಧ್ರ ಪ್ರದೇಶದ ಕಲಾವಿದ ನಾಗೇಶ್ವರ್, ಚಿತ್ತಾರ ಕಲೆಯ ಬಗ್ಗೆ ಸಾಗರದ ಅಂತರರಾಷ್ಟ್ರೀಯ ಕಲಾವಿದ ಈಶ್ವರನಾಯಕ್, ಘೋಂಡಾ ಕಲೆಯ ಬಗ್ಗೆ ವೆಂಕಟರಮಣ್ ಸಿಂಗ್ ಶ್ಯಾಮ್, ಪ್ಯಾಪಿಯರ್ ಮೆಶೆ ಬಗ್ಗೆ ಆದ್ದೇಶ್ ಕುಮಾರ್ ಕನ್೯, ಕಸೂತಿ ಬಗ್ಗೆ ಬಳ್ಳಾರಿಯ ಬಸಂತಿ, ಗಂಗೂಬಾಯಿ, ಸಂಗೀತದಲ್ಲಿ ಮೈಸೂರಿನ ವಿದ್ವಾನ್ ಮಂಜುನಾಥ್ , ವಿದ್ವಾನ್ ನಾಗರಾಜ್, ಕಂಸಾಳೆ ಬಗ್ಗೆ ಕನಾ೯ಟಕದ ಹೆಸರಾಂತ ಕಲಾವಿದ ರೇವಣ್ಣ, ಕಲರಿಪಯಟ್ ಬಗ್ಗೆ ಕೇರಳದ ಕ?ಷ್ಣದಾಸ್ ಅವರುಗಳಿಂದ ತರಬೇತಿ ನೀಡಲಾಗುತ್ತಿದೆ.
ಸಂಜೆ ೪.೩೦ ಗಂಟೆಗೆ ಈ ಕಲಾಪರಿಣಿತರು ತಮ್ಮಕಲಾಕ?ತಿಗಳನ್ನು ವಿವಿಧ ಮಳಿಗೆಗಳಲ್ಲಿ ಪ್ರದಶ೯ನ ಮತ್ತು ಮಾರಾಟಕ್ಕೆ ವ್ಯವಸ್ಥೆಗೊಳಿಸಿದ್ದು ಸಾವ೯ಜನಿಕರಿಗೆ ಸಂಜೆ ೪ ಗಂಟೆಯ ನಂತರ ಕ್ರಾಫ್ಟ್ ಮೇಳಕ್ಕೆ ಮುಕ್ತ ಪ್ರವೇಶವಿದೆ ಎಂದು ಮೇಳದ ಸಂಚಾಲಕ ಬಾಲಾಜಿ ಕಶ್ಯಪ್ ಮಾಹಿತಿ ನೀಡಿದ್ದಾರೆ.
ವೈಜಯಂತಿ ಕಾಶಿ ತಂಡದ ಕುಚಿಪುಡಿ ನೃತ್ಯ :
ಮಾಚ್೯ ೩೧ರಂದು ಭಾನುವಾರ ಸಂಜೆ ೬.೩೦ ರಿಂದ ೮ ಗಂಟೆಯವರೆಗೆ ಹೆಸರಾಂತ ನೃತ್ಯಕಲಾವಿದೆ ಬೆಂಗಳೂರಿನ ವೈಜಯಂತಿ ಕಾಶಿ ಮತ್ತು ಪ್ರತಿಕ್ಷಾ ಕಾಶಿ ತಂಡದಿಂದ ಕುಚಿಪುಡಿ ನೃತ್ಯ ಪ್ರದಶ೯ನವಿರುತ್ತದೆ. ವೈವಿಧ್ಯಮಯ ಕಲಕುಶಲ ವಸ್ತುಗಳ ಪ್ರದಶ೯ನ ಮತ್ತು ಮಾರಾಟ ಕೂಡ ಕ್ರಾಫ್ಟ್ ಮೇಳದಲ್ಲಿ ಆಯೋಜಿತವಾಗಿದೆ.

ಏಪ್ರಿಲ್ ೨೦ ರಿಂದ ಕಡಂಗದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ


ಏಪ್ರಿಲ್ ೨೦ ರಿಂದ ೨೫ ರವರೆಗೆ ಕಡಂಗದಲ್ಲಿ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟ
ಮಡಿಕೇರಿ ಮಾ.೩೦ :  ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಕಡಂಗದ ಅರಾಫ ಫ್ರೆಂಡ್ಸ್ ಸಂಯುಕ್ತ ಆಶ್ರಯದಲ್ಲಿ ೧೬ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ಏ.೨೦ರಿಂದ ೨೫ರವೆಗೆ ಕಡಂಗ ವಿಜಯ ಪ್ರೌಢಶಾಲೆ ಮೈದಾನದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಸೋಸಿಯೇಷನ್ ಕಾರ್ಯದರ್ಶಿ ಸೈಫ್ ಆಲಿ ಹಾಗೂ ಇತರರು, ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ೩೩,೩೧೩, ದ್ವಿತೀಯ ತಂಡಕ್ಕೆ ೨೨,೭೮೬ರೂ.ಗಳ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದಲ್ಲದೆ, ಸೆಮಿಫೈನಲ್ ಹಂತ ಪ್ರವೇಶಿಸಿದ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ಇತರ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದರು.
ಕಳೆದ ಸಾಲಿನಲ್ಲಿ ಮಡಿಕೇರಿಯಲ್ಲಿ ತ್ಯಾಗ್ ಬಾಯ್ಸ್ ಆಶ್ರಯದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸುಮಾರು ೧೨೨ ತಂಡಗಳು ಭಾಗವಹಿಸಿದ್ದು, ಈ ಬಾರಿ ೧೫೦ಕ್ಕೂ ಅಧಿಕ ತಂಡಗಳ ನಿರೀಕ್ಷೆಯಲ್ಲಿರುವುದಾಗಿ ಹೇಳಿದರು.
ಪಂದ್ಯಾವಳಿಯ ಹೆಚ್ಚಿನ ಮಾಹಿತಿ ಹಾಗೂ ತಂಡಗಳ ನೋಂದಣಿಗಾಗಿ 9483834424(ನೌಷದ್) 9448270786 (ಅರಾಫ) ಹಾಗೂ 7483977870 (ಸಮದ್) ಅವರುಗಳನ್ನು ಸಂಪರ್ಕಿಸಬಹುದೆಂದು ತಿಳಿಸಿದರು.

ದೇಶದ ಅತೀ ಹೆಚ್ಚು ಶ್ರೀಮಂತ ಪಕ್ಷ ಯಾವುದು ಗೊತ್ತೇ


"ದೇಶದ ಅತಿ ಹೆಚ್ಚು ಶ್ರೀಮಂತ ಪಕ್ಷ ಯಾವುದು ಗೊತ್ತಾ? "
ನವದೆಹಲಿ : ದೇಶದ ಅತಿ ದೊಡ್ಡ ಶ್ರೀಮತ ಪಕ್ಷವಾಗಿ ಭಾರತೀಯ ಜನತಾ ಪಕ್ಷ ಹೊರಹೊಮ್ಮಿದೆ. ಹೌದು, ಇಂಗ್ಲಿಷ್‌ ಖಾಸಗಿ ಮಾಧ್ಯಮವೊಂದು ವರದಿ ಮಾಡಿರುವ ಪ್ರಕಾರ 17-18ನೇ ಸಾಲಿನ ಹಣಕಾಸು ವರ್ಷದಲ್ಲಿ ಒಟ್ಟು 1,027.34 ಕೋಟಿ ರುಪಾಯಿ ಆದಾಯ ಘೋಷಿಸಿ ಘೋಷಿಸಿಕೊಂಡಿರುವ ಬಿಜೆಪಿ ಪಕ್ಷ ದೇಶದ ಅತಿ ಹೆಚ್ಚು ಆದಾಯವನ್ನು ಹೊಂದಿರುವ ಪಕ್ಷವಾಗಿದ್ದು, ಈ ಹಣದಲ್ಲಿ ಶೇಕಡ 53.9 ಹಣ ಅಂದರೆ ಸರಿ ಸುಮಾರು 700 ಕೋಟಿ ರೂಪಾಯಿಗಳು ಅಜ್ಞಾತ ಮೂಲಗಳಿಂದ ಪಕ್ಷಕ್ಕೆ ಬಂದಿದೆ ಎನ್ನಲಾಗಿದೆ. 17-18ನೇ ಸಾಲಿನ 6 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯ 1293.051ವಾಗಿದೆ ಎನ್ನಲಾಗಿದೆ.
2017-18ರಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಪಡೆದ ದೇಣಿಗೆ ವಿವರ ಹೀಗಿದೆ.
ಬಿಜೆಪಿ 1,027.34 ರೂ ಕೋಟಿ ಈ ಪೈಕಿ ಶೇಕಡ 53.9 ಹಣ ಅಜ್ಞಾತ ಮೂಲಗಳಿಂದ ಬಂದಿದೆ ಕಾಂಗ್ರೆಸ್‌ 199.15 ಕೋಟಿ ರೂ ಬಂದಿದ್ದು ಈ ಪೈಕಿ ಕಾಂಗ್ರೆಸ್‌ ಪಕ್ಷಕ್ಕೆ ಶೇಕಡ 60.2 ಹಣ ಅಜ್ಞಾತ ಮೂಲಗಳಿಂದ , ಬಿಎಸ್‌ಪಿ ಪಕ್ಷಕ್ಕೆ 51.694 ರೂ ಕೋಟಿ ಹಣ ಬಂದಿದ್ದು, ಇದರಲ್ಲಿ ಶೇಕಡ 20.6 ಹಣ ಅಜ್ಞಾತ ಮೂಲಗಳಿಂದ, ಎನ್‌ಸಿಪಿ ಪಕ್ಷಕ್ಕೆ 8.15 ರೂ ಕೋಟಿ ಹಣ ಬಂದಿದ್ದು, ಈ ಪೈಕಿ ಶೇಕಡ 65.9 ಅನ್ಯ ಮೂಲಗಳಿಂದ ಹಾಗೂ ಎಐಟಿಸಿ ಪಕ್ಷಕ್ಕೆ 5.167ರೂ ಕೋಟಿ ಹಣ ಬಂದಿದ್ದು, ಇದರಲ್ಲಿ ಶೇಕಡ 2.0 ಅಜ್ಞಾತ ಮೂಲಗಳಿಂದ ಕೊನೆಯಾದಾಗಿ ಸಿಪಿಐ ಪಕ್ಷಕ್ಕೆ 1.55 ರೂ ಕೋಟಿ ಹಣ ದೇಣಿಗೆ ರೂಪದಲ್ಲಿ ಬಂದಿದ್ದು, ಶೇಕಡ 0.2 ರಷ್ಟು ಹಣ ಮೂಲಗಳು ತಿಳಿದು ಬಂದಿಲ್ಲವಂತೆ.

ಬೃಹತ್ ರಕ್ತದಾನ ಶಿಬಿರ : ಎಸ್ ಎಸ್ ಎಫ್ ಕೊಡಗು ಜಿಲ್ಲಾ ಸಮಿತಿ


ಮಡಿಕೇರಿ : ತಾಜುಲ್ ಉಲಮಾರ ಸ್ಮರಣಾರ್ಥ SSF ಕೊಡಗು ಜಿಲ್ಲಾ ಸಮಿತಿಯು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ , ಲೆಡಿಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ  SSF ಕೊಡಗು ಜಿಲ್ಲಾ ಬ್ಲಡ್ ಸೈಬೋ ವತಿಯಿಂದ ಬೃಹತ್ ರಕ್ತದಾನ ಶಿಬಿರ ಎಪ್ರಿಲ್ 14 ಆದಿತ್ಯವಾರ ಬೆಳಗ್ಗೆ  9:00 ಗಂಟೆಗೆ ಕುಶಾಲನಗರ , ನಾಪೋಕ್ಲು , ವಿರಾಜಪೇಟೆಯಲ್ಲಿ ನಡೆಯಲಿದೆ ಎಂದು SSF ಕೊಡಗು ಜಿಲ್ಲಾಧ್ಯಕ್ಷರಾದ ಅಝೀಝ್ ಸಖಾಫಿ ಕೊಡ್ಲಿಪೇಟೆ ತಿಳಿಸಿದರು.
EXCLUSIVE REPORT >>>>>>>>>>

ನಟ ಯಶ್ ಕುಟುಂಬಕ್ಕೆ ಡೆಡ್ ಲೈನ್


ಬೆಂಗಳೂರು : ನಟ ಯಶ್ ಕುಟುಂಬ ವಾಸಿಸುತ್ತಿರುವ ಮನೆಯನ್ನು ಇನ್ನು 2 ತಿಂಗಳಲ್ಲಿ ಖಾಲಿ ಮಾಡಬೇಕೆಂದು ಹೈಕೋರ್ಟ್ ವಿಭಾಗೀಯ ಪೀಠ ಸೂಚಿಸಿದೆ . ಮನೆ ಮಾಲಿಕ ಕೊಟ್ಟ ದೂರಿನಂತೆ ಈ ಆದೇಶ ನೀಡಲಾಗಿದೆ.  ನಮಗೆ ಈಗ ಬಾಡಿಗೆ ಮನೆ ಹುಡುಕಲು ಕಷ್ಟವಾಗುತ್ತದೆ, ಹಾಸನದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದೆ , ಪೂರ್ಣಗೊಂಡ ತಕ್ಷಣ ಸ್ಥಳಾಂತರಿಸುತ್ತೇವೆ,  ಪೂರ್ಣಗೊಳ್ಳಲು ಇನ್ನೂ 6 ತಿಂಗಳು ಕಾಲಾವಕಾಶ ಬೇಕಿದೆ , ಎಂದು ಕಾಲಾವಕಾಶ ಕೋರಿ ಯಶ್ ತಾಯಿ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್ 2 ತಿಂಗಳ ಕಾಲಾವಕಾಶ ನೀಡಿದೆ.

ಬಾಲಚಂದ್ರ ಕಳಗಿ ಸಾವು ಪ್ರಕರಣ ಆರೋಪಿಗಳ ಬಂಧನ


ಬಾಲಚಂದ್ರ ಕಳಗಿ ಸಾವು ಪ್ರಕರಣ:ಆರೋಪಿಗಳ ಬಂಧನ
* ಮಾರ್ಚ್ ೧೯ರಂದು ನಡೆದ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣ
* ವೈನ್, ಮರಳು ಮಾಫಿಯಾ, ರಿಕ್ರಿಯೇಶನ್ ಕ್ಲಬ್ ಮಾಡಲು ಬಿಡದಕ್ಕೆ ಹತ್ಯೆ
* ಮೂವರು ಆರೋಪಿಗಳನ್ನು ಬಂಧಿಸಿದ ಕೊಡಗು ಜಿಲ್ಲಾ ಪೊಲೀಸರು
* ಅವರ ಚಿಕ್ಕಪ್ಪ ಸಲ್ಲಿಸಿದ ಸಂಶಯಾಸ್ಪದ ಬಗ್ಗೆ ದೂರು ಪರಿಗಣಿಸಿ ತನಿಖೆ
* ಮೂರು ಗುಮಾನಿ ವ್ಯಕ್ತಿಗಳಾದ ಸಂಪತ್ ಕುಮಾರ್(೩೪), ಹರಿಪ್ರಸಾದ್(೩೬), ಜಯ(೩೪)
* ಬೆಳಗ್ಗೆ ವಶಕ್ಕೆ ಪಡೆದು ತನಿಖೆ ನಡೆಸಿದಾಗ ಹತ್ಯೆ ನಡೆಸಿರುವುದು ಬೆಳಕಿಗೆ
* ಅಪಘಾತದ ಮಾದರಿಯಲ್ಲಿ ಅವರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ
* ಅವರ ನಡುವಿನ ವೈಯಕ್ತಿಕ ವಿಚಾರಕ್ಕೆ ಅಸಮಧಾನ ಇದ್ದ ಕಾರಣ ಕೃತ್ಯ
* ಸಂಪತ್ ವೈನ್ ಶಾಪ್‌ಗೆ ಅನುಮತಿ ಪಡೆಯಲು ಹೋದಾಗ ಕಳಗಿ ವಿರೋಧ
* ರಿಕ್ರಿಯೇಶನ್ ಕ್ಲಬ್ ಮಾಡುವುದಕ್ಕೂ ವಿರೋಧ ವ್ಯಕ್ತಪಡಿಸಿದ್ದ ಕಳಗಿ
* ಈ ಹಿನ್ನಲೆ ೧ ತಿಂಗಳಿನಿಂದ ಪ್ಲಾನ್ ಮಾಡಿ ಅಪಘಾತದ ರೂಪದಲ್ಲಿ ಕೃತ್ಯ
* ಅವರು ಕೊಯನಾಡಿನಲ್ಲಿ ಹೊರಟಿದ್ದನ್ನು ಗಮನಿಸಿ ಕಾದು ಕುಳಿತು ಲಾರಿ ಹತ್ತಿಸಿ ಹತ್ಯೆ
* ಜಯನ ವಾಹನ ಅಪಘಾತವಾದಾಗ ಬಿಡಿಸಿಕೊಟ್ಟಿದ್ದ ಸಂಪತ್
* ಹತ್ಯೆ ಮಾಡಿದ್ರೆ ೧.೫ ಲಕ್ಷದ ಲೋನ್ ಕ್ಲಿಯರ್ ಮಾಡಿಕೊಡ್ತೀನಿ ಅಂತ ಸಂಪನ್‌ನಿಂದ ಸುಪಾರಿ
* ಹರಿಪ್ರಸಾದ್ ಸ್ವಿಫ್ಟ್ ಕಾರು, ಅಪಘಾತದ ಲಾರಿ ವಶಕ್ಕೆ ಪಡೆಯಲಾಗಿದೆ
* ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ

ಕಾರ್ಯಪ್ಪ ಕಾಲೇಜು ವಾರ್ಷಿಕೋತ್ಸವ...





ಕಾರ್ಯಪ್ಪ ಕಾಲೇಜು ವಾರ್ಷಿಕೋತ್ಸವ : ಪ್ರತಿಭಾ ದಿನಾಚರಣೆಯಲ್ಲಿ ಗಮನ ಸೆಳೆದ ವಿದ್ಯಾರ್ಥಿಗಳು
ಮಡಿಕೇರಿ ಮಾ.೨೯ : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಸಾಕಷ್ಟು ಅಭಿವೃದ್ಧಿ ಹೊಂದಿದೆ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಉತ್ತಮ ಗುಣಮಟ್ಟದ ಸೌಲಭ್ಯ ನೀಡುತ್ತಿದೆ. ಉತ್ತಮ ಭವಿಷ್ಯಕ್ಕೆ ಇಂದಿನ ವಿದ್ಯಾರ್ಥಿ ಯುವಜನತೆ ಶ್ರಮವಹಿಸಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರು ಪ್ರೊ.ವಿ.ರವೀಂದ್ರಚಾರಿ ಅಭಿಪ್ರಾಯಪಟ್ಟರು.
ಎಫ್.ಎಂ.ಸಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದ ಪ್ರತಿಭಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ಇಂದು ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾನಿಲಯದಿಂದ ಹಲವಾರು ಶೈಕ್ಷಣಿಕ ಪ್ರೋತ್ಸಾಹ, ಗ್ರಂಥಾಲಯವನ್ನು ಅಭಿವೃದ್ಧಿಪಡಿಸಿದೆ. ಕ್ರೀಡಾಭಿವೃದ್ಧಿಗೆ ಕ್ರೀಡಾ ಸಾಮಾಗ್ರಿಗಳನ್ನು ನೀಡಲಾಗುತ್ತಿದೆ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿದೆ ಎಂದರು.
ಯುವ ಪ್ರತಿಭೆಗಳ ಸಾಧನೆಗೆ ವೇದಿಕೆ ಮತ್ತು ಪುರಷ್ಕಾರವನ್ನು ನೀಡುವ ಮೂಲಕ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಕೂಡ ಕಾಲೇಜಿನ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಗುರಿಯೊಂದಿಗೆ ಸಾಧನೆಯ ದೃಢ ಸಂಕಲ್ಪದಿಂದ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಲು ಶ್ರಮವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ರೋಟರಿ ಮಾಜಿ ಗವರ್ನರ್ ರೊ.ಸುರೇಶ್ ಚಂಗಪ್ಪ ಅವರು ಮಾತನಾಡಿ ವಿದ್ಯಾರ್ಥಿ ಜೀವನವೆಂಬುದು ಬಂಗಾರದಂತೆ, ಸಂವೇದನಾ ಶೀಲತೆಯನ್ನು ಬೆಳೆಸಿಕೊಂಡು ಪರೋಪಕಾರಿಯಾಗಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ವ್ಯಕ್ತಿತ್ವ ಮತ್ತು ಉತ್ತಮ ಕಾರ್ಯ ಪ್ರವೃತಿಯು ಆತ್ಮವಿಶ್ವಾಸ ಹೆಚ್ಚಿಸುತ್ತದೆ ಎಂದರು.
ಯುವ ಜನಾಂಗಕ್ಕೆ ಇಂದು ಸಾಕಷ್ಟು ಉತ್ತಮ ಅವಕಾಶಗಳಿದ್ದು ಅದರ ಸದುಪಯೋಗವನ್ನು ಪಡೆದುಕೊಂಡು ಸಮಾಜದಲ್ಲಿನ ಮೌಢ್ಯತೆ, ಅಜ್ಞಾನವನ್ನು ಹಾಗೂ ಸಾಮಾಜಿಕ ಪಿಡುಗುಗಳನ್ನು ತೊಲಗಿಸಲು ಇಂದಿನ ವಿದ್ಯಾರ್ಥಿ ಯುವ ಜನಾಂಗ ಶ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.
ಎಫ್‌ಎಂಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಟಿ.ಡಿ.ತಿಮ್ಮಯ್ಯ ಅವರು ಮಾತನಾಡಿ ಜಗತ್ತಿನ ಶ್ರೇಷ್ಠ ವ್ಯಕ್ತಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಸಾಧಿಸಿ ಸಂಪನ್ಮೂಲ ವ್ಯಕ್ತಿಯಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಇಂದಿನ ವಿದ್ಯಾರ್ಥಿ ಯುವ ಜನತೆಯು ಆದರ್ಶ ವ್ಯಕ್ತಿಗಳಾಗಲು ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಪ್ರತಿಭೋತ್ಸವದಲ್ಲಿ ಪ್ರಸಕ್ತ ಸಾಲಿನಲ್ಲಿ ವಿವಿಧ ಶೈಕ್ಷಣಿಕ ವಿಷಯಗಳಲ್ಲಿ ಹೆಚ್ಚು ಅಂಕಗಳನ್ನು ಪಡೆದು ಸಾಧನೆಯನ್ನು ಮಾಡಿದ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು.
ಸಮಾರಂಭದಲ್ಲಿ ಎಫ್‌ಎಂಸಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಪಾರ್ವತಿ ಅಪ್ಪಯ್ಯ, ಡಾ.ಎ.ಎನ್.ಗಾಯತ್ರಿ, ಡಾ.ಈ. ತಿಪ್ಪೇಸ್ವಾಮಿ ವಿವಿಧ ವಿಭಾಗದ ಅಧ್ಯಾಪಕರು, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳು ಹಾಜರಿದ್ದರು. ಎಂ.ಎನ್.ರವಿಶಂಕರ್ ಸ್ವಾಗತಿಸಿದರು, ಗೌತಮಿ ವಂದಿಸಿದರು.

ಮಾರ್ಚ್ ೩೧ ರಂದು ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಜನ್ಮದಿನಾಚರಣೆ


ಮಾ. 31 ರಂದು ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಜನ್ಮದಿನಾಚರಣೆ
ಮಡಿಕೇರಿ ಮಾ. ೨೯ : ದೇಶ ಕಂಡ ಅಪ್ರತಿಮ ಸೇನಾನಿ, ಪದ್ಮಭೂಷಣ ಜನರಲ್ ಕೆ.ಎಸ್. ತಿಮ್ಮಯ್ಯ ಅವರ ೧೧೩ನೇ ಜನ್ಮದಿನಾಚರಣೆ ಕಾರ್ಯಕ್ರಮವು ಮಾ. ೩೧ ರಂದು ನಗರದ ಸನ್ನಿಸೈಡ್ ಆವರಣದಲ್ಲಿ ನಡೆಯಲಿದೆ.
ಅಂದು ಬೆಳಿಗ್ಗೆ ೧೦ ಗಂಟೆಗೆ ಜಿ.ಟಿ. ವೃತ್ತದಲ್ಲಿರುವ ತಿಮ್ಮಯ್ಯ ಅವರ ಪ್ರತಿಮೆಗೆ ಪುಷ್ಪಾರ್ಚನೆಯ ಬಳಿಕ ಸನ್ನಿಸೈಡ್ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಫೋರಂನ ಮುಂದಾಳ್ವದಲ್ಲಿ ಜಿಲ್ಲಾಡಳಿತದ ಸಹಕಾರ ಪಡೆದು ಹಮ್ಮಿಕೊಳ್ಳಲಾಗಿದ್ದು, ತಿಮ್ಮಯ್ಯ ಅವರ ಅಭಿಮಾನಿಗಳು, ಮಾಜಿ ಸೈನಿಕರು, ನಿವೃತ್ತ ಅಧಿಕಾರಿಗಳು, ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಫೋರಂ ವಿನಂತಿಸಿದೆ.
ಕಾರ್ಯಕ್ರಮಕ್ಕೆ ಅತಿಥಿಗಳಾಗಿ ನಿವೃತ್ತ ಮೇಜರ್ ಜನರಲ್ ಕುಪ್ಪಂಡ ಪಿ. ನಂಜಪ್ಪ (ವೀರಚಕ್ರ) ಅವರು ಪಾಲ್ಗೊಳ್ಳಲಿದ್ದಾರೆ. ಫೋರಂ ಅಧ್ಯಕ್ಷ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ, ಸಂಚಾಲಕ ಮೇಜರ್ ಬಿದ್ದಂಡ ನಂದಾ ನಂಜಪ್ಪ, ಕಾರ್ಯದರ್ಶಿ ಉಳ್ಳಿಯಡ ಎಂ. ಪೂವಯ್ಯ ಮತ್ತಿತರರು ಹಾಜರಿರುವರು.
ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನಿಂದ..
ಮಡಿಕೇರಿಯಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್‌ನ ವತಿಯಿಂದಲೂ ಮಾ. ೩೧ ರಂದು ಪ್ರತ್ಯೇಕವಾದ ಕಾರ್ಯಕ್ರಮ ಜರಿಗಲಿದೆ. ಬೆಳಿಗ್ಗೆ ೯ಕ್ಕೆ ಶಾಲೆಯಿಂದ ತಿಮ್ಮಯ್ಯ ಪ್ರತಿಮೆ ತನಕ ಮೆರವಣೆಗೆ ನಡೆಸಿ ಅಲ್ಲಿ ಪುಷ್ಪ ನಮನ ಸಲ್ಲಿಸಲಾಗುವುದು. ಬಳಿಕ ಶಾಲಾ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತಿಮ್ಮಯ್ಯ ಅವರ ಇತಿಹಾಸದ ಮೆಲುಕು ಸಹಿತವಾಗಿ ಸಭಾ ಕಾರ್ಯಕ್ರಮ ನಡೆಯಲಿದೆ.

ಮಡಿಕೇರಿಯಲ್ಲಿ ವಿಶ್ವ ಜಲ ದಿನಾಚರಣೆ


ಮಳೆ ನೀರು ಸಂಗ್ರಹಣೆಗೆ ಒತ್ತು ನೀಡಿ : ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಕರೆ
ಮಡಿಕೇರಿ ಮಾ.೨೯ : ಪ್ರತಿಯೊಂದು ದಿನಾಚರಣೆಗೂ ಕೂಡ ತನ್ನದೆ ಆದ ಇತಿಹಾಸವಿದೆ. ಅದರಂತೆ ಇಂದು ವಿಶ್ವ ಜಲ ದಿನವೆಂದು ಆಚರಿಸಲಾಗುತ್ತದೆ. ನೀರಿನ ಕೊರತೆಯು ಕರಾವಳಿಯಿಂದ-ಕಾವೇರಿ ನಾಡಿನಲ್ಲಿಯು ಈ ಭೀತಿ ಕಾಣುತ್ತಿದೆ. ಬಯಲು ಸೀಮೆಯ ಜನರು ತೀವ್ರ ಬರಗಾಲವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಇಂದಿನ ನಗರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣೆಗೆ ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ನೀರು ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಣ್ಯ ರಕ್ಷಣೆಯಿಂದ ನೀರಿನ ಸಂರಕ್ಷಣೆ ಮಾಡಲು ಸಾಧ್ಯ. ನೀರಿನ ಸದ್ಬಳಕೆ ಮತ್ತು ಮರು ಬಳಕೆಯನ್ನು ಮಾಡುವ ಮೂಲಕ ಇಂದಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಜನಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಈ ಮೂಲಕ ಮುಂದಿನ ಭವಿಷ್ಯಕ್ಕೆ ನೀರಿನ ಸಂರಕ್ಷಣೆಯನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಮಾತನಾಡಿ ಕಾವೇರಿ ನಾಡಿಗೆ ಬರಗಾಲ ಬಂದಿದೆ. ಜಿಲ್ಲೆಯ ಹಾರಂಗಿ, ಕಣಿವೆ, ತಲಕಾವೇರಿ ಮುಂತಾದ ಸ್ಥಳಗಳಲ್ಲಿ ನೀರಿನ ಗುಣಮಟ್ಟದ ಅಧ್ಯಯನ ನಡೆಸಿದ್ದು, ನೀರಿನ ಕೊರತೆ ಹಾಗೂ ಕಲುಷಿತಗೊಂಡಿರುವುದು ದೃಡಪಟ್ಟಿದೆ. ಆದ್ದರಿಂದ ಚರಂಡಿ ಕಲುಷಿತ ನೀರು ಹಾಗೂ ಪ್ಲಾಷ್ಟಿಕ್, ತ್ಯಾಜ್ಯ ವಸ್ತುಗಳನ್ನು ನದಿಗೆ ಹರಿಯ ಬಿಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮುಂದಿನ ಪೀಳಿಗೆಗೆ ನೀರಿನ ಸಂರಕ್ಷಣೆಯು ಅಗತ್ಯವಾಗಿದೆ. ಇಂದು ನೀರಿನ ಹಿತ-ಮಿತ ಬಳಕೆ ಮಾಡಬೇಕಿದೆ. ದಿನನಿತ್ಯದ ಜೀವನದಲ್ಲಿ ನೀರಿನ ಬಳಕೆಯ ಅಂಕಿ ಅಂಶವನ್ನು ಮಾಡಿಕೊಂಡು ಭವಿಷ್ಯಕ್ಕೆ ನೀರನ್ನು ಉಳಿಸುವಲ್ಲಿ ಇಂದಿನ ಯುವಜನತೆ ಶ್ರಮಿಸಬೇಕು ಎಂದರು.
ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಜಿ.ಶ್ರೀನಾಥ್ ಅವರು ಮಾತನಾಡಿ ತ್ಯಾಜ್ಯ ವಸ್ತುಗಳನ್ನು ನದಿ ನೀರಿಗೆ ಹರಿಯ ಬಿಡುವುದರಿಂದ ಹಲವಾರು ನದಿ-ತೊರೆಗಳು ಕಲುಷಿತಗೊಂಡಿದೆ. ಇದನ್ನು ತಡೆಗಟ್ಟಬೇಕು. ಅಂತರ್ಜಲದ ನೀರಿನ ಮಟ್ಟ ಕುಸಿದಿದ್ದು ಕೊಳವೆ ಬಾವಿಗಳ ನಿರ್ಮಾಣ ಕಡಿಮೆಗೊಳಿಸಬೇಕು. ನೀರಿನ ಅನವಶ್ಯಕ ಬಳಕೆಯನ್ನು ಕಡಿಮೆ ಮಾಡಲು ಜಾಗೃತಿ ವಹಿಸಬೇಕು ಎಂದು ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ಚಿತ್ರಾ ಅವರು ಮಾತನಾಡಿ ನೀರು ಸಕಲ ಜೀವಜಂತುಗಳ ಮೂಲಾಧಾರವಾಗಿದ್ದು, ನೀರನ್ನು ಹೊಸದಾಗಿ ಆವಿಷ್ಕಾರ ಮಾಡಲು ಅಸಾಧ್ಯ. ಆದ್ದರಿಂದ ಇರುವ ನೀರಿನ ಮೂಲಗಳನ್ನು ರಕ್ಷಿಸಲು ಪ್ರತಿಯೊಬ್ಬ ಪ್ರಜೆಯು ನೀರಿನ ಸಂರಕ್ಷಣೆ ಮಾಡುವುದು ಮೂಲಭೂತ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಸಂಚಾಲಕರಾದ ಟಿ.ಜಿ.ಪ್ರೇಮ್‌ಕುಮಾರ್ ಅವರು ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ಪರಿಸರ ಸಂರಕ್ಷಣೆಯ ಕುರಿತು ನಡೆಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪರಿಸರ ಸಂರಕ್ಷಣೆಯ ಕುರಿತು ದೃಶ್ಯ ಪ್ರದರ್ಶನ ಏರ್ಪಡಿಸಲಾಯಿತು.
ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ಸ್ಕೌಟ್ ಅಂಡ್ ಗೈಡ್ಸ್‌ನ ಜಿಲ್ಲಾಧ್ಯಕ್ಷರಾದ ಜಿಮ್ಮಿ ಸಿಕ್ವೇರಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಬಿ.ಆರ್.ಶಶಿದರ್, ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ ಹಾಗೂ ವಿವಿಧ ವಿಭಾಗದ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ. ಬಿ.ಆರ್.ಶಶಿದರ್ ಸ್ವಾಗತಿಸಿದರು, ಬಿ.ಜಯಪ್ಪ ವಂದಿಸಿದರು.

ಮಡಿಕೇರಿಯಲ್ಲಿ ವಿಶ್ವ ಜಲ ದಿನಾಚರಣೆ

ಮಳೆ ನೀರು ಸಂಗ್ರಹಣೆಗೆ ಒತ್ತು ನೀಡಿ : ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಕರೆ
ಮಡಿಕೇರಿ ಮಾ.೨೯ : ಪ್ರತಿಯೊಂದು ದಿನಾಚರಣೆಗೂ ಕೂಡ ತನ್ನದೆ ಆದ ಇತಿಹಾಸವಿದೆ. ಅದರಂತೆ ಇಂದು ವಿಶ್ವ ಜಲ ದಿನವೆಂದು ಆಚರಿಸಲಾಗುತ್ತದೆ. ನೀರಿನ ಕೊರತೆಯು ಕರಾವಳಿಯಿಂದ-ಕಾವೇರಿ ನಾಡಿನಲ್ಲಿಯು ಈ ಭೀತಿ ಕಾಣುತ್ತಿದೆ. ಬಯಲು ಸೀಮೆಯ ಜನರು ತೀವ್ರ ಬರಗಾಲವನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಇಂದಿನ ನಗರಗಳಲ್ಲಿನ ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹಣೆಗೆ ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ನೀರು ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸ ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಇತರೆ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶುಕ್ರವಾರ ನಡೆದ ವಿಶ್ವ ಜಲ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಣ್ಯ ರಕ್ಷಣೆಯಿಂದ ನೀರಿನ ಸಂರಕ್ಷಣೆ ಮಾಡಲು ಸಾಧ್ಯ. ನೀರಿನ ಸದ್ಬಳಕೆ ಮತ್ತು ಮರು ಬಳಕೆಯನ್ನು ಮಾಡುವ ಮೂಲಕ ಇಂದಿನ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಜನಜಾಗೃತಿ ಮೂಡಿಸುವ ಅನಿವಾರ್ಯತೆ ಇದೆ. ಈ ಮೂಲಕ ಮುಂದಿನ ಭವಿಷ್ಯಕ್ಕೆ ನೀರಿನ ಸಂರಕ್ಷಣೆಯನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಮಾತನಾಡಿ ಕಾವೇರಿ ನಾಡಿಗೆ ಬರಗಾಲ ಬಂದಿದೆ. ಜಿಲ್ಲೆಯ ಹಾರಂಗಿ, ಕಣಿವೆ, ತಲಕಾವೇರಿ ಮುಂತಾದ ಸ್ಥಳಗಳಲ್ಲಿ ನೀರಿನ ಗುಣಮಟ್ಟದ ಅಧ್ಯಯನ ನಡೆಸಿದ್ದು, ನೀರಿನ ಕೊರತೆ ಹಾಗೂ ಕಲುಷಿತಗೊಂಡಿರುವುದು ದೃಡಪಟ್ಟಿದೆ. ಆದ್ದರಿಂದ ಚರಂಡಿ ಕಲುಷಿತ ನೀರು ಹಾಗೂ ಪ್ಲಾಷ್ಟಿಕ್, ತ್ಯಾಜ್ಯ ವಸ್ತುಗಳನ್ನು ನದಿಗೆ ಹರಿಯ ಬಿಡುವುದನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಮುಂದಿನ ಪೀಳಿಗೆಗೆ ನೀರಿನ ಸಂರಕ್ಷಣೆಯು ಅಗತ್ಯವಾಗಿದೆ. ಇಂದು ನೀರಿನ ಹಿತ-ಮಿತ ಬಳಕೆ ಮಾಡಬೇಕಿದೆ. ದಿನನಿತ್ಯದ ಜೀವನದಲ್ಲಿ ನೀರಿನ ಬಳಕೆಯ ಅಂಕಿ ಅಂಶವನ್ನು ಮಾಡಿಕೊಂಡು ಭವಿಷ್ಯಕ್ಕೆ ನೀರನ್ನು ಉಳಿಸುವಲ್ಲಿ ಇಂದಿನ ಯುವಜನತೆ ಶ್ರಮಿಸಬೇಕು ಎಂದರು.
ಕುಶಾಲನಗರ ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರಾದ ಜಿ.ಶ್ರೀನಾಥ್ ಅವರು ಮಾತನಾಡಿ ತ್ಯಾಜ್ಯ ವಸ್ತುಗಳನ್ನು ನದಿ ನೀರಿಗೆ ಹರಿಯ ಬಿಡುವುದರಿಂದ ಹಲವಾರು ನದಿ-ತೊರೆಗಳು ಕಲುಷಿತಗೊಂಡಿದೆ. ಇದನ್ನು ತಡೆಗಟ್ಟಬೇಕು. ಅಂತರ್ಜಲದ ನೀರಿನ ಮಟ್ಟ ಕುಸಿದಿದ್ದು ಕೊಳವೆ ಬಾವಿಗಳ ನಿರ್ಮಾಣ ಕಡಿಮೆಗೊಳಿಸಬೇಕು. ನೀರಿನ ಅನವಶ್ಯಕ ಬಳಕೆಯನ್ನು ಕಡಿಮೆ ಮಾಡಲು ಜಾಗೃತಿ ವಹಿಸಬೇಕು ಎಂದು ಅವರು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ. ಚಿತ್ರಾ ಅವರು ಮಾತನಾಡಿ ನೀರು ಸಕಲ ಜೀವಜಂತುಗಳ ಮೂಲಾಧಾರವಾಗಿದ್ದು, ನೀರನ್ನು ಹೊಸದಾಗಿ ಆವಿಷ್ಕಾರ ಮಾಡಲು ಅಸಾಧ್ಯ. ಆದ್ದರಿಂದ ಇರುವ ನೀರಿನ ಮೂಲಗಳನ್ನು ರಕ್ಷಿಸಲು ಪ್ರತಿಯೊಬ್ಬ ಪ್ರಜೆಯು ನೀರಿನ ಸಂರಕ್ಷಣೆ ಮಾಡುವುದು ಮೂಲಭೂತ ಕರ್ತವ್ಯ ಎಂದರು.
ಕಾರ್ಯಕ್ರಮದಲ್ಲ್ಲಿ ರಾಜ್ಯ ವಿಜ್ಞಾನ ಪರಿಷತ್ತಿನ ಸಂಚಾಲಕರಾದ ಟಿ.ಜಿ.ಪ್ರೇಮ್‌ಕುಮಾರ್ ಅವರು ಪರಿಸರ ಸಂರಕ್ಷಣೆಯ ಪ್ರತಿಜ್ಞಾವಿಧಿ ಬೋಧಿಸಿದರು. ಪರಿಸರ ಸಂರಕ್ಷಣೆಯ ಕುರಿತು ನಡೆಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಪರಿಸರ ಸಂರಕ್ಷಣೆಯ ಕುರಿತು ದೃಶ್ಯ ಪ್ರದರ್ಶನ ಏರ್ಪಡಿಸಲಾಯಿತು.
ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ಸ್ಕೌಟ್ ಅಂಡ್ ಗೈಡ್ಸ್‌ನ ಜಿಲ್ಲಾಧ್ಯಕ್ಷರಾದ ಜಿಮ್ಮಿ ಸಿಕ್ವೇರಾ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಪ್ರಾಧ್ಯಾಪಕರಾದ ಪ್ರೊ.ಬಿ.ಆರ್.ಶಶಿದರ್, ಸ್ಕೌಟ್ಸ್ ಮತ್ತು ಗೈಡ್ಸ್ ಉಪಾಧ್ಯಕ್ಷರಾದ ಕೆ.ಟಿ.ಬೇಬಿ ಮ್ಯಾಥ್ಯೂ ಹಾಗೂ ವಿವಿಧ ವಿಭಾಗದ ಅಧ್ಯಾಪಕರು, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ. ಬಿ.ಆರ್.ಶಶಿದರ್ ಸ್ವಾಗತಿಸಿದರು, ಬಿ.ಜಯಪ್ಪ ವಂದಿಸಿದರು.

ಲೋಕಸಭಾ ಚುನಾವಣೆ ಕಾರ್ಯ ಚಟುವಟಿಕೆ :ಕೊಡಗಿನ ಮಾಹಿತಿ ಪಡೆದ ಚುನಾವಣಾ ವೀಕ್ಷಕರು


ಲೋಕಸಭಾ ಚುನಾವಣೆ ಕಾರ್ಯ ಚಟುವಟಿಕೆ : ಕೊಡಗಿನ ಮಾಹಿತಿ ಪಡೆದ ಚುನಾವಣಾ ವೀಕ್ಷಕರು
ಮಡಿಕೇರಿ ಮಾ.೨೯ : ಕೊಡಗು-ಮೈಸೂರು ಲೋಕಸಭಾ ಚುನಾವಣಾ ಸಾಮಾನ್ಯ ವೀಕ್ಷಕರಾದ ಕುಲದೀಪ್ ನಾರಾಯಣ ಮತ್ತು ಪೊಲೀಸ್ ವೀಕ್ಷಕರಾದ ಡಾ.ವಿಕಾಸ್ ಪಾಠಕ್ ಅವರು ಲೋಕಸಭಾ ಚುನಾವಣೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಪಿಪ್ರಿಯಾ ಅವರಿಂದ ಮಾಹಿತಿ ಪಡೆದರು.
ನಗರದ ಸುದರ್ಶನ ಅತಿಥಿ ಗೃಹದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯನ್ನು ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನಡೆಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಮತಗಟ್ಟೆ ಕೇಂದ್ರಗಳ ಸುಸ್ಥಿತಿ, ಚೆಕ್‌ಪೋಸ್ಟ್‌ಗಳ ಕಾರ್ಯ ನಿರ್ವಹಣೆ, ವಲ್ನರಬಲ್ ಪ್ರದೇಶದಲ್ಲಿ ಹೆಚ್ಚಿನ ನಿಗಾವಹಿಸುವುದು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು, ಸಿ-ವಿಜಿಲ್ ಗಮನಹರಿಸುವುದು, ರಾಜಕೀಯ ಪಕ್ಷದ ತಾರಾ ಪ್ರಚಾರಕರ ಸಭೆ-ಸಮಾರಂಭಗಳು ಹಾಗೂ ಮತದಾನದ ಮಹತ್ವ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತಿತರ ಬಗ್ಗೆ ಮಾಹಿತಿ ಪಡೆದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಲೋಕಸಭಾ ಚುನಾವಣೆಯನ್ನು ಸುಗಮ ಹಾಗೂ ಸುವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಮತಗಟ್ಟೆ ಅಧಿಕಾರಿಗಳಿಗೆ ಒಂದು ಸುತ್ತಿನ ತರಬೇತಿ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಗೆ ಹೊಂದಿಕೊಂಡಿರುವ ಅಂತರ ರಾಜ್ಯ ಗಡಿಭಾಗ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೧೪ ಚೆಕ್‌ಪೊಸ್ಟ್ ಸ್ಥಾಪಿಸಲಾಗಿದ್ದು, ಚೆಕ್‌ಪೋಸ್ಟ್‌ಗಳಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಅವರು ವಲ್ನರಬಲ್ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಶಾಂತಿಯುತವಾಗಿ ಚುನಾವಣೆ ನಡೆಸಲು ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಂಡಿದೆ ಎಂದು ಅವರು ಮಾಹಿತಿ ನೀಡಿದರು.
ಸ್ವೀಪ್ ಸಮಿತಿ ಅಧ್ಯಕ್ಷರಾದ ಕೆ.ಲಕ್ಷ್ಮಿಪ್ರಿಯಾ ಅವರು ಮತದಾನದ ಮಹತ್ವ ಕುರಿತು ಜಾಥ, ರ‍್ಯಾಲಿ, ಓಟ, ಸಭೆ-ಸಮಾರಂಭ ಸಂದರ್ಭದಲ್ಲಿ ಪ್ರತಿಜ್ಞಾ ವಿಧಿ ಬೋಧನೆ, ವಿದ್ಯುನ್ಮಾನ ಮತಯಂತ್ರ, ವಿವಿಪ್ಯಾಟ್ ಪ್ರಾತ್ಯಕ್ಷಿಕೆ, ಬೀದಿನಾಟಕ ಹೀಗೆ ನಾನಾ ಚಟುವಟಿಕೆ ಕೈಗೊಳ್ಳಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು, ಸಹಾಯಕ ಚುನಾವಣಾಧಿಕಾರಿಗಳಾದ ಟಿ.ಜವರೇಗೌಡ, ಶ್ರೀನಿವಾಸ್ ಅವರು ಲೋಕಸಭಾ ಚುನಾವಣೆ ಸಂಬಂಧ ಹಲವು ಮಾಹಿತಿ ನೀಡಿದರು. ತಹಶೀಲ್ದಾರರಾದ ನಟೇಶ್, ಗೋವಿಂದ ರಾಜು, ವೀಕ್ಷಕರ ನೋಡಲ್ ಅಧಿಕಾರಿಗಳಾದ ನಟರಾಜು, ಪ್ರಮೋದ್ ಇತರರು ಹಾಜರಿದ್ದರು.

ರೇವಣ್ಣನ ಎದುರಲ್ಲೇ " ಕೈ" ವಾರ್ : ಹಾಸನ


ಅರಸೀಕೆರೆ (ಹಾಸನ) : ಇಂದು ಹಾಸನದ ಅರಸಿಕೇರೆ ಯಲ್ಲಿ ನಡೆಯುತ್ತಿದ್ದ  ಕಾರ್ಯಕ್ರಮ
ದಲ್ಲಿ ಕಾಂಗ್ರೆಸ್ ಕಾರ್ಯಕರ್ತರು-ನಾಯಕರ ಮಧ್ಯೆ ಮಾತಿನ ಚಕಮಕಿ ನಡೆದಿದೆ. " ಅರಸೀಕೆರೆ ಕಾಂಗ್ರೆಸ್ ಮಾಯವಾಗಿದೆ. ಕನ್ನಡಕ ಇಟ್ಟು ಹುಡುಕಿದರು ಸಿಗಲ್ಲ " ಎಂದು ಆಕ್ರೋಶಗೊಂಡಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಈ ಬಾರಿ ಜೆಡಿಎಸ್ ನಿಂದ ಅಭ್ಯರ್ಥಿ ಸ್ಪರ್ದಧಿಸುತ್ತಿದೆ . ರೇವಣ್ಣರ ಮುಂದೆಯೇ ಜೆಡಿಎಸ್ ವಿರುದ್ದ ಹರಿಹಾಯ್ದ ಕೈ ಕಾರ್ಯಕರ್ತರು " ನಾವು ಕಟ್ಟಾ ಕಾಂಗ್ರೆಸ್, ನಾವು ಜೆಡಿಎಸ್ ಗೆ ಮತ ಹಾಕಲ್ಲ  , ನಾವು ಬಿಜೆಪಿಗೆ ಮತ ಹಾಕುತ್ತೇವೆ " ಎಂದು ಘೋಷಣೆ ಕೂಗಿದ್ದಾರೆ. ನಾಯಕರ ಮಾತಿಗೆ ತಲೆಬಾಗದ ಕೈ ಕಾರ್ಯಕರ್ತರು . ತಬ್ಬಿಬಾದ ರೇವಣ್ಣ.
EXCLUSIVE REPORT >>> EXCLUSIVE REPORT

ಕೂಲ್ ಹಾಗಿ ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಾಟ ವೀಕ್ಷಿಸಿದ ಮಾಜಿ ಸಿ.ಎಂ ಸಿದ್ದರಾಮಯ್ಯ


ರಾಜಕೀಯ ಜಂಜಾಟದ ನಡುವೆಯೂ ಐಪಿಎಲ್ ಪಂದ್ಯ ವೀಕ್ಷಿಸಿದ ಮಾಜಿ ಸಿ.ಎಂ ಸಿದ್ದರಾಮಯ್ಯ..
ಬೆಂಗಳೂರು: ಎಲ್ಲೆಡೆ ಲೋಕಸಭೆ ಚುನಾವಣೆ ಕಾವು ಜೋರಾಗಿದ್ದು, ರಾಜಕೀಯ ನಾಯಕರೆಲ್ಲಾ ಪ್ರಚಾರ, ನಾಮಪತ್ರ ಸಲ್ಲಿಕೆ, ಸಮಾವೇಶ, ಐಟಿ ದಾಳಿ ಮೊದಲಾದವುಗಳಲ್ಲಿ ಬ್ಯುಸಿಯಾಗಿದ್ದಾರೆ.
ರಾಜ್ಯದಲ್ಲಿ ರಾಜಕೀಯ ನಾಯಕರು ಟೆನ್ಷನ್ ನಲ್ಲಿ ಇದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಐಪಿಎಲ್ ಮ್ಯಾಚ್ ವೀಕ್ಷಿಸಿದ್ದಾರೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯವನ್ನು ಸಿದ್ದರಾಮಯ್ಯ ವೀಕ್ಷಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ರಾಜಕೀಯ ನಾಯಕರಿಗೆ ಒತ್ತಡ, ಆತಂಕ ಸಹಜ. ಆದರೆ, ಸಿದ್ದರಾಮಯ್ಯ ಅವರಂತಹ ಸ್ಥಿತಪ್ರಜ್ಞ ಒತ್ತಡವಾದರೂ ಅದನ್ನು ತೋರಗೊಡದೆ ಕೂಲಾಗಿ ಐಪಿಎಲ್ ಪಂದ್ಯ ವೀಕ್ಷಿಸಿದ್ದಾರೆ. ಈ ಹಿಂದೆ ಕರ್ನಾಟಕ ಕಂಡ ವರ್ಣರಂಜಿತ ರಾಜಕಾರಣಿ ಎಸ್. ಬಂಗಾರಪ್ಪ, ವೋಟ್ ಮಾಡಿ ಮಧ್ಯಾಹ್ನ ಕುಟುಂಬದವರೊಂದಿಗೆ ಸಿನಿಮಾ ವೀಕ್ಷಿಸಿದ್ದರು. ಮತದಾನದ ದಿನ ಕೂಡ ಒತ್ತಡಕ್ಕೆ ಒಳಗಾಗದೇ ಅವರು ಸಿನಿಮಾ ನೋಡಿದ್ದು ಭಾರೀ ಸುದ್ದಿಯಾಗಿತ್ತು.

ಹಾಸನ ಬಿಜೆಪಿಗೆ ಶಾಕ್...


ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗಾ ರಮೇಶ್ ಕಾಂಗ್ರೆಸ್ ಸೇರ್ಪಡೆ
ಬೆಂಗಳೂರು, ಮಾ. 28: ಹಾಸನ ಜಿಲ್ಲೆಯ ಬಿಜೆಪಿ ಘಟಕದ ಅಧ್ಯಕ್ಷ ಯೋಗಾ ರಮೇಶ್ ಅವರು ಪಕ್ಷ ತೊರೆದು ವಿದ್ಯುಕ್ತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಯೋಗಾ ರಮೇಶ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಗುರುವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಝಮೀರ್ ಅಹ್ಮದ್ ಖಾನ್, ಯೋಗಾ ರಮೇಶ್ ಅವರಿಗೆ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ. ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಕೊಂಚ ಹಿನ್ನೆಡೆಯಾಗಿತ್ತು. ಭವಿಷ್ಯದಲ್ಲಿ ಪಕ್ಷಕ್ಕೆ ಒಳ್ಳೆಯದಾಗಲಿದೆ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದವರೆ ಇಂದು ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ನಮ್ಮ ಉದ್ದೇಶ ಬಿಜೆಪಿಯನ್ನು ಸೋಲಿಸುವುದು. ಹೀಗಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ಈಗ ಯೋಗಾ ರಮೇಶ್ ಪಕ್ಷಕ್ಕೆ ಸೇರ್ಪಡೆಯಿಂದ ಹಾಸನ ಜಿಲ್ಲೆಗೆ ಆನೆ ಬಲ ಬಂದಂತಾಗಿದೆ ಎಂದ ಅವರು, ಎ.ಮಂಜು ತಮ್ಮ ಸ್ವಾರ್ಥಕ್ಕಾಗಿ ಬಿಜೆಪಿಗೆ ಹೋಗಿದ್ದಾರೆ. ಅವರಿಗೆ ಮುಂದೆ ತಮ್ಮ ತಪ್ಪಿನ ಅರಿವಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥ್, ಹಾಸನ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾಅಮರನಾಥ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.

ಅಕ್ರಮ‌ ಸ್ಫೋಟಕ ಪತ್ತೆ: ಕುಶಾಲನಗರದಲ್ಲಿ‌ ಐವರ ಬಂಧನ


ಮಡಿಕೇರಿ ಮಾ.28 :
ಮನೆಯೊಂದರಲ್ಲಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ದಾಸ್ತಾನಿರಿಸಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕುಶಾಲನಗರ ಸಮೀಪದ ಸುಂದರನಗರದ ನಿವಾಸಿಗಳಾದ ಆರ್.ಮಂಜು(೩೭) ಕುಬೇರ(೪೫), ಮಣಿ (೩೩) ಬೈಚನಹಳ್ಳಿಯ ಕೆ.ಆರ್.ರವಿ (೩೧) ಬೆಟ್ಟದಪುರ ಹಲಗನಹಳ್ಳಿಯ ರಿಜ್ವಾನ್ ಅಹಮದ್ (೫೪) ಎಂದು ಗುರುತಿಸಲಾಗಿದೆ.
ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಸುಂದರನಗರದ ಮಂಜು ಎಂಬವರ ಮನೆಗೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಪರಿಶೀಲಿಸಿದಾಗ ಮನೆಯಲ್ಲಿ ೨೧ ಎಲೆಕ್ಟ್ರಿಕಲ್ ಡಿಟೋನೇಟರ್, ೨೦೦ ನಾನ್ ಎಲೆಕ್ಟ್ರಿಕಲ್ ಡಿಟೋನೇಟರ್, ೨೩೯ ಅಮೋನಿಯಂ ನೈಟ್ರೇಟ್ ಜೆಲ್ ಟ್ಯೂಬ್‌ಗಳು, ತಲಾ ೫ಕೆಜಿಯ ೫ ಪ್ಯಾಕೇಟ್ ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ಹಾಗೂ ೧೪ ರೋಲ್ ಸೇಫ್ಟಿ ಫ್ಯೂಸ್‌ಗಳು ಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಈ ಸಂಬಂಧ ಪೊಲೀಸರು ಸ್ಫೊಟಕ ವಸ್ತುಗಳ ಅಧಿನಿಯಮ-೧೯೦೮ರ ಕಲಂ ೫ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಐವರನ್ನು ಬಂಧಿಸಿದ್ದು, ಬಂಧಿತರಲ್ಲಿ ಮಂಜು, ಮಣಿ ಹಾಗೂ ರವಿ ಕೂಲಿ ಕಾರ್ಮಿಕರಾಗಿದ್ದು, ಕುಬೇರ ಆಟೋ ಚಾಲಕ ಮತ್ತು ರಿಜ್ವಾನ್ ಕೃಷಿಕ ಎಂದು ಹೇಳಲಾಗಿದೆ. ಆದರೆ ಇವರುಗಳು ಇಷ್ಟೊಂದು ಪ್ರಮಾಣದ ಸ್ಪೋಟಕ ವಸ್ತುಗಳನ್ನು ಯಾವ ಕಾರಣಕ್ಕೆ ದಾಸ್ತಾನು ಇರಿಸಿದ್ದರು ಎಂಬುದು ಪೊಲೀಸರ ತನಿಖೆಯಿಂದಷ್ಟೇ ಬಹಿರಂಗವಾಗಬೇಕಿದೆ.
ಈಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪೆನ್ನೇಕರ್ ಅವರ ಮಾರ್ಗದರ್ಶನ ಹಾಗೂ ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಎಸ್.ದಿನೇಶ್‌ಕುಮಾರ್ ಅವರ ನೇತೃತ್ವದಲ್ಲಿ ಕುಶಾಲನಗರ ಠಾಣಾಧಿಕಾರಿ ನಂದೀಶ್‌ಕುಮಾರ, ಜಗದೀಶ್, ವಿಶೇಷ ಅಪರಾಧ ಪತ್ತೆ ತಂಡದ ದಯಾನಂದ, ಸಜಿ, ಸುರೇಶ್‌ಮ ಜೋಸೆಫ್, ಅಜಿತ್, ಸುಧೀಶ್‌ಕುಮಾರ, ಪ್ರಕಾಶ್, ಅರುಣ, ಮನೋಜ್, ನಾಗರಾಜ್, ಶಾಫಿನ್ ಅಹ್ಮದ್, ಸಂಪತ್ ರೈ, ಚಾಲಕರಾದ ಗಣೇಶ್, ಪ್ರವೀಣ್, ರಾಜ ಹಾಗೂ ಕೊಡಗು ಬಾಂಬ್ ನಿಷ್ಕ್ರಿಯದಳದ ತಜ್ಞ ಜಿತೇಂದ್ರ ರೈ ಮತ್ತು ಶಿವಾನಂದ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.