business

5/cate1/business

lifestyle

6/cate2/lifestyle

travel

6/cate3/travel

Sport

5/cate4/Sport

entertainment

5/cate5/entertainment
Powered by Blogger.

ಮಾಲ್ದಾರೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಿ ಪಿ ಐ ಎಂ ಒತ್ತಾಯ:

ಮಾಲ್ದಾರೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ  ಸಿ ಪಿ ಐ ಎಂ ಒತ್ತಾಯ ಸಿದ್ದಾಪುರ :-  ಸಿದ್ದಾಪುರ ಮಾಲ್ದಾರೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ...

videos

3/cate6/videos

Recent post

ಮಾಲ್ದಾರೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಿ ಪಿ ಐ ಎಂ ಒತ್ತಾಯ:

ಮಾಲ್ದಾರೆಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ  ಸಿ ಪಿ ಐ ಎಂ ಒತ್ತಾಯ
ಸಿದ್ದಾಪುರ :-  ಸಿದ್ದಾಪುರ ಮಾಲ್ದಾರೆ  ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ  ತ್ಯಾಜ್ಯ ವಿಲೇವಾರಿಗೆ ಸೂಕ್ತ ಜಾಗದ ಸಮಸ್ಯೆಯಿಂದ  
 ಹಲವು ವರ್ಷಗಳಿಂದಲೂ  ಎರಡು ಪಂಚಾಯತಿಯ ಗ್ರಾಮಸ್ಥರು  ಸಮಸ್ಯೆಗಳನ್ನು ಎದುರಿಸುತ್ತಿದ್ದು  ಇದೀಗ ತ್ಯಾಜ್ಯ ವಿಲೇವಾರಿ  ಸಮಸ್ಯೆ ಬಗ್ಗೆ ಹರಿಸಲು ಆರೆಂಜ್ ಕೌಂಟ್ ಸಂಸ್ಥೆ   ಎರಡು ಪಂಚಾಯಿತಿಗಳ ಅನುಕೂಲಕ್ಕಾಗಿ  ಜಾಗ ಖರೀದಿ ಮಾಡಿ  ಉಧಾರವಾಗಿ ನೀಡಿದ್ದು  
 ಆದಷ್ಟು ಬೇಗ ಉದ್ದೇಶಿತ  ಜಾಗದಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಬೇಕೆಂದು  ಸಿಪಿಐಎಂ  ಜಿಲ್ಲಾ ಕಾರ್ಯದರ್ಶಿ  ಎಚ್ ಬಿ ರಮೇಶ್ ಒತ್ತಾಯಿಸಿದ್ದಾರೆ. 
 ಸಿದ್ದಾಪುರದಲ್ಲಿ ಕರೆದ ಪತ್ರಿಕೆ ಗೋಷ್ಟಿಯಲ್ಲಿ ಮಾತನಾಡಿ.
 ಹಲವು  ವರ್ಷಗಳಿಂದಲೂ ತ್ಯಾಜ್ಯದ ಸಮಸ್ಯೆ ಮಿತಿಮೀರಿತ್ತು 
 ಪಕ್ಷದ ವತಿಯಿಂದ ಹಲವು ಬಾರಿ ಪ್ರತಿಭಟನೆ ಮಾಡಲಾಗಿತ್ತು 
 ವಿರಾಜಪೇಟೆ ಕ್ಷೇತ್ರದ ಶಾಸಕ ಎ ಎಸ್ ಪೊನ್ನಣ್ಣ ಅವರ  ಮುತುವರ್ಜಿಯಿಂದ 
 ಮಾಲ್ದಾರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಘಟಕ ನಿರ್ಮಾಣವಾಗುತ್ತಿದ್ದು 
 ಎರಡು ಗ್ರಾಮದ ಸಮಸ್ಯೆ ಬಗೆಹರಿಯಲಿದೆ.
 ಸಮಸ್ಯೆ ಬಗೆಹರಿಸಲು ಮುಂದಾಗದ  ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವ  ಪಟಬದ್ದ ಹಿತಾ ಶಕ್ತಿಗಳು
 ಮಾಲ್ದಾರೆ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸುವ ಮೂಲಕ  ಜನರನ್ನ ದಾರಿ ತಪ್ಪಿಸುತ್ತಿದೆ.
 ಅಧಿಕಾರಿಗಳು  ಕೂಡಲೇ ಉದ್ದೇಶಿತ ಜಾಗದಲ್ಲಿ  ವೈಜ್ಞಾನಿಕ ಘಟಕ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
 ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರುಗಳಾದ  ಪಿ ಆರ್ ಭರತ್, ಕುಟ್ಟಪ್ಪ, ಶಾಜಿ ಉಪಸ್ಥಿತರಿದರು

ಹಿಜಾಬ್ ವಿವಾದ : ಬಾಲಿಶತನ ಹಾಗೂ ಸಂವಿದಾನ ವಿರುದ್ದ ಹೇಳಿಕೆಯನ್ನು ನೀಡಿದ ಮೈಸೂರು-ಕೊಡಗು ಸಂಸದನ ವಿರುಧ್ಧ ಶಾಫಿ ಸಅದಿ ಆಕ್ರೋಶ

ಸೋಮವಾರಪೇಟೆ : ಇದು ಜ್ಯಾತ್ಯಾತೀತ ರಾಷ್ಟ್ರ , ಇಲ್ಲಿ ಪ್ರತಿಯೊಬ್ಬರಿಗೂ ಅವರದ್ದೆೇ ಆದ ಧರ್ಮವನ್ನು ಸಂಸ್ಕ್ೃತಿಯನ್ನು ಪಾಲಿಸಿ ಬದುಕುವ ಹಕ್ಕಿದೆ. ಅದನ್ನು ಕಸಿದುಕೊಳ್ಳುವ ಅಥವಾ ಅದರ ವಿರುಧ್ಧ ಮಾತನಾಡುವ ಅಧಿಕಾರ ಯಾವ ವ್ಯಕ್ತಿಗೂ ಇಲ್ಲ. ಆ ರೀತಿ ಮಾತನಾಡುವುದು ಸಂವಿಧಾಕ್ಕೆ ವಿರುಧ್ಧವಾಗಿದೆ.  ಸಂವಿಧಾನದ ವಿರುದ್ಧ ಮಾತನಾಡಿ ದೇಶದ್ರೋಹವನ್ನು ಎಸಗಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಸ್ಸೆಸ್ಸೆಫ್ ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿಯವರು ತೀವ್ರ ಆಕ್ರೇಶ ವ್ಯಕ್ತಪಡಿಸಿದ್ದಾರೆ.

ಸಂವಿಧಾನವನ್ನು ತಿಳಿಯದ ಹಾಗೂ ಅದನ್ನು ಪಾಲಿಸಿದ ಯಾವೊಬ್ಬನಿಗೂ, ಸಂಸದನಾಗಲಿಕ್ಕೊ, ಮಂತ್ರಿಯಾಗಲಿಕ್ಕೂ, ಶಾಸಕನಾಗಲಿಕ್ಕೊ ಯಾವುದೇ ಅರ್ಹತೆಯಿಲ್ಲ  ಎಂದರು.

ವಿವಸ್ತ್ರಧಾರಿಗಳಾದ ಮುನಿಗಳನ್ನೂ ಗೌರವಿಸುತ್ತಿರುವ ಈ ದೇಶದಲ್ಲಿ ಮೊಣಕಾಲ ವರೆಗಿನ ವಸ್ತ್ರ ಧರಿಸುವ ಹಾಗೂ ಹಿಜಾಬ್ ಧಾರಣೆಯ ಬಗ್ಗೆ ಮೂರ್ಖತನದ ಹೇಳಿಕೆ ನೀಡಿರುವ ಸಂಸದರು ತನ್ನ ಸ್ಥಾನಕ್ಕೆ ಚ್ಯುತಿ ತಂದುಕೊಂಡಿದ್ದಾರೆ.

ಧರ್ಮಪಾಲನೆಯನ್ನು ಮಾಡುವವರು ಮದರಸಕ್ಕೆ ಹೋಗಿ ಎನ್ನುವುದಾದರೆ    ಹಣೆಗೆ ತಿಲಕವನ್ನಿಟ್ಟು, ಹಿಂದೂ ಧರ್ಮದ ಸಂಸ್ಕೃತಿಯನ್ನು ಪಾಲನೆ ಮಾಡಿ ಬರುವ ಎಷ್ಟೋ ವಿದ್ಯಾರ್ಥಿಗಳು ಶಾಲೆಗಳಲ್ಲಿದ್ದಾರೆ, ಧರ್ಮಪಾಲನೆಯನ್ನು ಶಾಲೆಯಲ್ಲಿ ಮಾಡಬಾರದೆಂದು ಅವರ ನಿಲುವಾಗಿದ್ದಲ್ಲಿ  ಈ ವಿದ್ಯಾರ್ಥಿಗಳನ್ನು ಮಠಗಳಿಗೆ ಕಳುಹಿಸಲು ಸಾಧ್ಯವೇ?

ಹಿಂದೂ ರಾಷ್ಟ್ರದ ಬಗ್ಗೆ ಧ್ವನಿ ಎತ್ತುವ ಮೊದಲು ದೇಶದ ಇತಿಹಾಸವನ್ನು ಮೊದಲು ಅರಿಯಬೇಕು. ನೈಜ ಭಾರತೀಯರು ಯಾರು ಎಂಬುವುದರ ಬಗ್ಗೆ ಅರಿವಿರಬೇಕು. ತಮ್ಮ ಅಭಿವೃದ್ದಿಯ ಬಗ್ಗೆ ಹೇಳಿಕೊಳ್ಳಲು ಏನೂ ಇಲ್ಲದಿರುವಾಗ ರಾಜಕೀಯ ಮುಖಂಡರು ಧಾರ್ಮಿಕ ವಿಚಾರಗಳನ್ನು ಎಳೆದು ತಂದು ಕಿಡಿ ಹೊತ್ತಿಸುವುದನ್ನು ನಿಲ್ಲಿಸಿ ಅಭಿವೃಧ್ದಿಯ ಕಡೆ ಗಮನ ಕೊಟ್ಟು ದೇಶವನ್ನು ಮುನ್ನಡೆಸುವ ಕೆಲಸ ಮಾಡಬೇಕಿದೆ.

ಮಾನ್ಯ ಸಂಸದರು, ಇಂತಹ ಕೋಮು ಪ್ರಚೋದನೆ ನೀಡುವುದು ಈ ಮೊದಲಲ್ಲ. ಕೊಡಗು ಜಿಲ್ಲೆಗೆ ಸಿಗಬೇಕಾದ ಸವಲತ್ತುಗಳನ್ನು ಕೇಳಿ ಪಡೆಯಲು ನಾಲಿಗೆ ಚಲಿಸದ ಸಂಸದರು, ರಾಜಕೀಯ ಲಾಭಕ್ಕಾಗಿ ಈ ರೀತಿಯ ಮೂರ್ಖತನ, ಬಾಲಿಶತನದ ಹೇಳಿಕೆಯನ್ನು ನೀಡಿರುವುದು ಖಂಡನಾರ್ಹ ಎಂದು ಶಾಫಿ ಸಅದಿ ಕಿಡಿಕಾರಿದ್ದಾರೆ.

ಸಿದ್ದಾಪುರದಲ್ಲಿ ಸಿಪಿಎಂ ಪಕ್ಷದಿಂದ ಸಿ.ಎ.ಎ ಹಾಗೂ ಎನ್.ಪಿ.ಆರ್ ವಿಚಾರ ಸಂಕಿರಣ

ಪೌರತ್ವ ಮಾನವ ಹಕ್ಕಾಗಿದೆ, ಭಿಕ್ಷೆಯಲ್ಲ: ಜಯರಾಜನ್

ಸಿದ್ದಾಪುರ, ಫೆ.15: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಹಾಗೂ ಎನ್.ಪಿ.ಆರ್ ಕುರಿತು ವಿಚಾರ ಸಂಕಿರಣ ಮತ್ತು ಸಭೆ ಸಿದ್ದಾಪುರದ ಎಸ್.ಎಸ್.ಡಿ.ಪಿ ಸಭಾಂಗಣದಲ್ಲಿ ನಡೆಯಿತು.

ಸಿಪಿಎಂ ಪಕ್ಷದ ಪಕ್ಷದ ಗ್ರಾಮ ಸಮಿತಿಯ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಕಣ್ಣೂರು ಜಿಲ್ಲೆಯ ಕಾರ್ಯದರ್ಶಿ ಎಂ.ವಿ. ಜಯರಾಜನ್ ಮಾತನಾಡಿ,  ಕೇಂದ್ರದ ಬಿಜೆಪಿ ಸರಕಾರವು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ಇತ್ತೀಚೆಗೆ ಜಾರಿಗೆ ತಂದಿರುವ ಸಿ.ಎ.ಎ. ಹಾಗೂ ಎನ್.ಆರ್.ಸಿ. ಕಾಯ್ದೆಯು ಅದರ ಭಾಗವಾಗಿದೆ ಎಂದ ಅವರು, ಪೌರತ್ವವು ದೇಶದ ಜನರ ಹಕ್ಕಾಗಿದೆ ಅಲ್ಲದೆ ಸರಕಾರದ ಭಿಕ್ಷೆಯಲ್ಲ. ಕೇಂದ್ರ ಸರ್ಕಾರವು ನಿರ್ದಿಷ್ಟ ಸಮುದಾಯವನ್ನು ಗುತಿಯಾಗಿಸಿ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿರುವುದರ ಹಿಂದೆ ಫ್ಯಾಸಿಸ್ಟ್ ಅಜೆಂಡಾ ಅಡಗಿದೆ ಎಂದು ಆರೋಪಿಸಿದರು. ಈ ಕಾಯ್ದೆಯನ್ನು ವಿರೋಧಿಸುತ್ತಿರುವವರನ್ನು ಕೇಂದ್ರದ ಗೃಹ ಸಚಿವರು ಹಾಗೂ ಪ್ರಧಾನಿಗಳು ಭಯೋತ್ಪಾದಕರು ಮತ್ತು ದೇಶದ್ರೋಹಿಗಳೆಂದು ಟೀಕಿಸುತ್ತಿರುವುದು ಖಂಡನೀಯ ಎಂದರು.
ಕೊಡಗು ಪ್ರಗತಿಪರ ಜನಾಂದೋಲನ ವೇದಿಕೆಯ ಪ್ರಮುಖರಾದ ವಿ.ಪಿ. ಶಶಿಧರ್ ಮಾತನಾಡಿ, ಬಿಜೆಪಿ ಪಕ್ಷವು  ನಿರಂತರದ ಅಧಿಕಾರ ವ್ಯಾಮೋಹದಲ್ಲಿ ಮುಂದುವರೆಯಲು ಕೇಂದ್ರ ಸರ್ಕಾರವು ಇತ್ತೀಚೆಗೆ ಪೌರತ್ವ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದು ಟೀಕಿಸಿದರು. ಹಿಂದೂ ಧರ್ಮದ ಹೆಸರಿನಲ್ಲಿ ಮತ್ತೊಂದು ಧರ್ಮದ ಮೇಲೆ ಅಪಪ್ರಚಾರ ಮಾಡಿ ಮುಸ್ಲಿಂ ಜನಾಂಗದ ಮೇಲೆ ದ್ವೇಷ ಸಾಧಿಸುತ್ತಿದೆ ಎಂದು ಆರೋಪಿಸಿದರು. ಬಿಜೆಪಿ ಪಕ್ಷವು ಮತ ಬ್ಯಾಂಕಿಗಾಗಿ ಪೌರತ್ವವನ್ನು ಜಾರಿಗೆ ತರುವ ಮೂಲಕ ಹುನ್ನಾರ ನಡೆಸಿ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುತ್ತಿದೆ ಎಂದು ದೂರಿದರು.
ಈ ಸಂದರ್ಭ ಪಕ್ಷದ ಕಣ್ಣೂರು ಜಿಲ್ಲಾ ಮುಖಂಡರಾದ ಶ್ರೀಧರನ್ ಹಾಗೂ ಕೊಡಗು ಜಿಲ್ಲಾ ಮುಖಂಡ ಡಾ. ಐ.ಆರ್. ದುರ್ಗಾ ಪ್ರಸಾದ್ ಇತರರು ಮಾತನಾಡಿದರು.
 ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ಬಿ. ರಮೇಶ್, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಡಾ. ಪಿ.ಸಿ. ಹಸೈನಾರ್ ಹಾಜಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಹಾದ, ಸಿದ್ದಾಪುರ ಗ್ರಾ.ಪಂ ಅಧ್ಯಕ್ಷ ಮಣಿ, ಪ್ರಮುಖರಾದ ಮೂಸಾ,  ಮಹದೇವ್ ಸೇರಿದಂತೆ ಮತ್ತಿತರರು ಇದ್ದರು.