ಸೋಮವಾರಪೇಟೆ : ಕಾಫಿ ತೋಟದಲ್ಲಿ ತಾಯಿ ಮಗಳನ್ನ ಕತ್ತಿಯಿಂದ ಕಡಿದು ಭೀಕರವಾಗಿ ಕೊಲೆ ಮಾಡಿರೋ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ದೊಡ್ಡಮಲ್ತೆ ಗ್ರಾಮದಲ್ಲಿ ನಡೆದಿದೆ. ಕವಿತಾ(45), ಜಗಶ್ರೀ(16) ಹತ್ಯೆಯಾದವರು. ಕಾಫಿತೋಟವೊಂದರ ಮನೆಯಲ್ಲಿದ್ದ ಇಬ್ಬರನ್ನು ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಮಂಗಳೂರಿನ ಕಾಲೇಜೊಂದರಲ್ಲಿ ಪ್ರಥಮ ಪಿಯುಸಿ
ಮುಗಿಸಿರುವ ಜಗಶ್ರೀ ರಜೆಗೆಂದು ಇತ್ತೀಚೆಗಷ್ಟೇ ಊರಿಗೆ ಬಂದಿದ್ರು. ಆಸ್ತಿ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗಿದ್ದು, ಸೋಮವಾರಪೇಟೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಇತ್ತೀಚೆಗಷ್ಟೇ ಸೋಮವಾರಪೇಟೆ ತಾಲ್ಲೂಕಿನ ಆಲೂರು ಸಿದ್ಧಾಪುರದಲ್ಲೂ ಡಬ್ಬಲ್ ಮರ್ಡರ್ . ಸಾಮಾನ್ಯವಾಗಿ ಕೊಡಗಿನಲ್ಲಿ ಆಸ್ತಿಗಾಗಿ ವಿಚಾರದಲ್ಲಿ ಶುರುವಾಗೋ ಜಗಳ ಅಷ್ಟಕ್ಕೇ ಮುಗಿಯದೇ ಕೊಲೆಯಲ್ಲಿ ಅಂತ್ಯವಾಗುವ ಪ್ರಕರಣಗಳು ನಡೆಯುತ್ತಲೇ ಇರೋದು ನಿಜಕ್ಕೂ ದುರಂತ.


No comments
Post a Comment