ಮಹಿಳಾ ಕಾಂಗ್ರೆಸ್-,ಜೆಡಿಎಸ್ ಕಾರ್ಯಕರ್ತೆಯರಿಂದ ಚೆಟ್ಟಳ್ಳಿ, ನೆಲ್ಲಿಹುದಿಕೇರಿ, ಸಿದ್ದಾಪುರದಲ್ಲಿ ಮತಯಾಚನೆ

No comments

ಮಹಿಳಾ  ಕಾಂಗ್ರೆಸ್-ಜೆಡಿಎಸ್   ಕಾರ್ಯಕರ್ತೆಯರಿಂದ  ಚೆಟ್ಟಳ್ಳಿ .ನೆಲ್ಯಹುದಿಕೇರಿ.  ಸಿದ್ದಾಪುರದಲ್ಲಿ ಮತಯಾಚನೆ 
ಸಿದ್ದಾಪುರ : ಕೊಡಗು ಮೈಸೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್ ವಿಜಯಶಂಕರ್ ಪರ ಸಿದ್ದಾಪುರ, ನೆಲ್ಯಹುದಿಕೇರಿ, ಚೆಟ್ಟಳ್ಳಿಯಲ್ಲಿ  ಜಿಲ್ಲಾ  ಮಹಿಳಾ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತೆಯರು ಮತಯಾಚಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್ ಮಾಧ್ಯಮದೊಂದಿಗೆ ಮಾತನಾಡಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಪರ ಜಿಲ್ಲೆಯಾದ್ಯಂತ ಮತಯಾಚನೆ ಮಾಡುತ್ತಿದ್ದು ಉತ್ತಮ ಸ್ಪಂದನೆ ದೊರಕಿದೆ
ಮೈತ್ರಿ ಸರ್ಕಾರದ ಜನಪರ ಕಾಳಜಿ ಸಾಧನೆಗಳೊಂದಿಗೆ ಅಭಿವೃದ್ಧಿ ಕಂಡಿರುವ ಜಿಲ್ಲೆಯಲ್ಲಿ ಮತದಾರರು ಮೈತ್ರಿ ಅಭ್ಯರ್ಥಿ ಪರ ಹೆಚ್ಚು ಒಲವು ತೋರುತ್ತಿದ್ದು ಅತ್ಯಧಿಕ ಮತಗಳಿಂದ ಜಯ ಸಾಧಿಸಲಿದ್ದಾರೆ 
ಐದು ವರ್ಷ ಆಳಿದ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಹಿಳ ಮೀಸಲಾತಿಯನ್ನು ಕಡೆಗಣಿಸಿದ್ದಾರೆ  ಎಂದು ಆರೋಪಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶಾಂತಿ ಅಚ್ಚಪ್ಪ ಮಾತನಾಡಿ  ಮೈತ್ರಿ ಸರಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ  ಹೆಚ್ಚು ಅನುದಾನ ನೀಡುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ  ಕೈಜೋಡಿಸಿದ್ದು  ರೈತರು ಬೆಳೆಗಾರರು ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ
ಪ್ರಕೃತಿ ದುರಂತ ಸಂದರ್ಭದಲ್ಲೂ ಜಿಲ್ಲೆಗೆ ಆರು ಬಾರಿ ಭೇಟಿ ನೀಡಿ ಸಂತ್ರಸ್ತರಿಗೆ   ಸೂರು ಕಲ್ಪಿಸುವ ಮೂಲಕ  ನೆರವಾಗಿದ್ದಾರೆ ಜಿಲ್ಲೆಯ ಎಲ್ಲ ಸಮುದಾಯಕ್ಕೂ ಯೋಜನೆಗಳನ್ನು ನೀಡುವ ಮೂಲಕ ಅಭಿವೃದ್ಧಿಗೆ ಕಾರಣರಾಗಿದ್ದಾರೆ ಮೈತ್ರಿ ಸರ್ಕಾರದ ಅಭ್ಯರ್ಥಿ ವಿಜಯಶಂಕರ್ ಈ ಬಾರಿ ಹೆಚ್ಚು ಮತಗಳಿಂದ ಗೆಲುವು ಸಾಧಿಸಲಿದ್ದಾರೆ ಎಂದರು.
ಈ ಸಂದರ್ಭ ಜೆಡಿಎಸ್ ಕಾಂಗ್ರೆಸ್ ಮಹಿಳಾ ಘಟಕದ ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿನ್ಹಾಜ್ ಕೆಪಿಸಿಸಿ ಕಾರ್ಯದರ್ಶಿ ತಾಹಿರಾ ಹಫೀಜ್,ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಪುಷ್ಪಾವತಿ, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಅಧ್ಯಕ್ಷೆ ಅಮೀನ,ಮಡಿಕೇರಿ ಬಾಕ್ ಕಾಂಗ್ರೆಸ್ ಅಧ್ಯಕ್ಷ ಶಶಿ  ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪ್ರೇಮಾ ದೇವಜಾನು ಪೂವಮ್ಮ ಮುಮ್ತಾಜ್ ಬೇಗಂ ನಿರ್ಮಲಾ ಚಂದ್ರಿಕಾ ಪ್ರೇಮ ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಯಮುನಾ ಪ್ರಮುಖರಾದ ಎಂ.ಎಸ್ ವೆಂಕಟೇಶ್ ,ಮಂಜುನಾಥ್, ಜಾಫರ್, ಖಾದರ್,ಮಹಮ್ಮದ್ ಅಲಿ  ಸೇರಿದಂತೆ ಮತ್ತಿತರರು ಇದ್ದರು  ರ್ಯಕರ್ತೆಯರಿಂದ ಮತಯಾಚನೆ
ಚಿತ್ರ ಎಂ ಡಿ ಕೆ 15 ಎಸ್ ಡಿ ಆರ್ 2 ಸಿದ್ದಾಪುರದಲ್ಲಿ ಮಹಿಳ ಕಾಂಗ್ರೆಸ್ ಕಾರ್ಯಕರ್ತೆಯರಿಂದ ಮತಯಾಚನೆ

No comments

Post a Comment