ಅಂಬಿ ಜಯಂತ್ಯುತ್ಸವ: ಮಂಡ್ಯದ ಜನತೆಗೆ ತಲೆ ಬಾಗಿ ನಮಿಸಿದ ಯಜಮಾನ ​​​


ಮಂಡ್ಯ: ಅಂಬರೀಶ್​ ಅವರ ಜಯಂತ್ಯುತ್ಸವ ಸಮಾರಂಭದಲ್ಲಿ ಸಕ್ಕರೆನಾಡಿನ ಜನರಿಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್ ತಲೆ ಬಾಗಿ ನಮಿಸುವ ಮೂಲಕ ಸುಮಲತಾ ಅವರನ್ನು ಗೆಲ್ಲಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು.
ಮಾರಂಭದಲ್ಲಿ ಮಾತನಾಡಿದ ಅವರು, ನಾನು ಅಂಬರೀಶ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ಹೇಳಲ್ಲ, ಬದಲಾಗಿ ಮಂಡ್ಯ ಜನರಿಗೆ ಶುಭಾಶಯ ಹೇಳ್ತೀನಿ. ಏಕೆಂದರೆ ಪಕ್ಷಗಳನ್ನ ಎದುರು ಹಾಕಿಕೊಂಡು, ನಮಗಾಗಿ ದುಡಿದು ಇಂದು ಸುಮಲತಾ ಅವರನ್ನು ಗೆಲ್ಲಿಸಿದ್ದೀರಿ. ನಾನು ಸಾಯೋವರೆಗೂ ನಿಮಗೆ ರುಣಿಯಾಗಿರುತ್ತೇನೆ ಎಂದರು.
ಏನ್ರಯ್ಯಾ ನಾನು ಬದುಕಿದ್ದಾಗ ಅಷ್ಟು ಪ್ರೀತಿ ಕೊಟ್ರಿ, ನಾನು ಸತ್ತಮೇಲು ಅದರ ಡಬಲ್​ ಪ್ರೀತಿ ಕೊಡ್ತಿದ್ದಿರಲ್ಲ ಅಂತ ವೇದಿಕೆ ಮೇಲಿನ ಅಂಬಿ ಅವರ ಫೋಟೋ ನೋಡ್ತಿದ್ರೆ ನನಗೆ ಅನ್ನಿಸುತ್ತಿತ್ತು ಎಂದು ಅಂಬರೀಶ್​ ಅವರನ್ನು ದಚ್ಚು ಸ್ಮರಿಸಿದರು.