ಮೈತ್ರಿಗೆ ತೊಂದರೆ ಇಲ್ಲ,ಸರ್ಕಾರ ಮುಂದುವರಿಯುತ್ತದೆ: ಕೆ.ಹೆಚ್‌.ಮುನಿಯಪ್ಪ


ಬೆಂಗಳೂರು: ಮೈತ್ರಿ ಸರ್ಕಾರ ಮುಂದುವರಿಯುತ್ತದೆ. ಸರ್ಕಾರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಅಭಿಪ್ರಾಯಪಟ್ಟಿದ್ದಾರೆ.
ಕುಮಾರ ಕೃಪಾ ಗೆಸ್ಟ್​​ಹೌಸ್​​ನಲ್ಲಿ ಕೆ.ಸಿ ವೇಣುಗೋಪಾಲ್ ಭೇಟಿ ಬಳಿಕ ಮಾತನಾಡಿ, ದೊಡ್ಡ ಪಕ್ಷವಾಗಿರುವ ಕಾರಣ ಕೊಂಚ ಭಿನ್ನಮತ ಉಂಟು. ಕಾಂಗ್ರೆಸ್​ಗೆ ಹಿಂದೆಯೂ ಇಂತಹ ಪರಿಸ್ಥಿತಿ ಬಂದಿತ್ತು. ಮತ್ತೆ ಬಲಿಷ್ಠವಾಗಿ ಪಕ್ಷ ಸಂಘಟನೆ ಆಗಿದೆ. ಈಗಲೂ ಮತ್ತೆ ಪಕ್ಷ ಸದೃಡವಾಗಿ ಬೆಳೆಯಲಿದೆ. ಮೈತ್ರಿ ಸರ್ಕಾರಕ್ಕೆ ಯಾವುದೇ ಆತಂಕವಿಲ್ಲ ಎಂದರು.
ಸೋಲಿಗೆ ಕಾರಣಗಳಿವೆ.ಆದರೆ ಹೇಳುವ ಸಂದರ್ಭ ಇದಲ್ಲ. ಮತ್ತೊಮ್ಮೆ ಆ ಎಲ್ಲ ಕಾರಣಗಳನ್ನು ಹೇಳುತ್ತೇನೆ. ಕೋಲಾರದಲ್ಲಿ ಗೆದ್ದವರು ಒಳ್ಳೆಯ ಕೆಲಸ‌ ಮಾಡಲಿ. ಲೀಡರ್ಸ್ ಬರ್ತಾರೆ ಹೋಗ್ತಾರೆ. ಆದರೆ ಕಾರ್ಯಕರ್ತರು ಇರ್ತಾರೆ. ಕೋಲಾರದಲ್ಲಿ ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ ಎಂದರು.