ವಿವೇಕ ಟ್ರಸ್ಟ್ ವತಿಯಿಂದ ಹಸಿರೇ ಉಸಿರು ಕಾರ್ಯಕ್ರಮ 

No comments



ವರದಿ  : ಮಾಸಿಂ ಶರೀಫ್ ಹುಣಸೂರು ( ಜೂನ್ 24 ) : ವಿವೇಕ ಟ್ರಸ್ಟ್ ವತಿಯಿಂದ ಹಸಿರೇ_ಉಸಿರು ಎಂಬ ಕಾರ್ಯಕ್ರಮದಡಿಯಲ್ಲಿ ಕಲ್ಕುಣಿಕೆಯ ರಂಗನಾಥ ಬಡಾವಣಿಯ ಹಿರಿಯ ಪ್ರೌಢಶಾಲೆಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಗಿಡಗಳನ್ನ ನೆಡುವುದರ ಮೂಲಕ ಹಾಗೂ ಶಾಲಾ ಮಕ್ಕಳಿಗೆ ಪ್ಲ್ಯಾಸ್ಟಿಕ್ ಬಳಕೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿ ಅವರಿಗೂ ಒಂದೊಂದು ಗಿಡವನ್ನ ನೀಡುವುದರ ಮೂಲಕ ಹಸಿರೇ ಉಸಿರು ಎಂಬ

ಕಾರ್ಯಕ್ರಮವನ್ನ ಆಚರಿಸಲಾಯಿತು ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ‌ ಖ್ಯಾತ ಹಿರಿಯ ವಕೀಲರಾದಂತಹ ಸತೀಶ್ ಸರ್ ,ರಾಜು ಸರ್ ಹಾಗೂ ಮಂಜುನಾಥ್ ರವರು ಭಾಗವಹಿಸಿದ್ದರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಅಶೋಕ ಗೋವಿಂದನಾಯಕ್ ,ಮಹೇಶ ಹಾಗೂ ಶಿವಕುಮಾರ್ ,ರವಿ ಹಾಗೂ ವಿವೇಕ ಟ್ರಸ್ಟ್ ನ ಸದಸ್ಯರು ಹಾಗೂ ಹಿತೈಷಿಗಳಾದ

ಲೋಕೇಶ್ ,ಅಭಿ ,ನಿಶಾಂತ್ ,ಭಾಗವಹಿಸಿದ್ದರು ಈ ವೇಳೆ ಮಾತನಾಡಿದ ವಿವೇಕ ಟ್ರಸ್ಟ್ ನ ಅಧ್ಯಕ್ಷರಾದ ಪ್ರಮೋದ್ ಕುಮಾರ್ ರವರು ಉಸಿರಾಡುವುದಕ್ಕೆ ಗಾಳಿಯೇ ಇಲ್ಲವೆಂದಮೇಲೆ ಉಸಿರೇ ಇರುವುದಿಲ್ಲ ಆದ್ದರಿಂದ ಗಿಡಮರಗಳನ್ನ ನೆಟ್ಟು ಅದನ್ನು ಪೋಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದ್ದರಲ್ಲದೇ ಮುಂದೆ ಇದೇ ರೀತಿಯಾದ ಅನೇಕ ಕಾರ್ಯಕ್ರಮಗಳನ್ನ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗುವುದು ಎಲ್ಲರೂ ಸಹಕರಿಸಬೇಕೆಂದು ಕೋರಿದರು ಹುಣಸೂರು ತಾಲೂಕಿನ ಕಲ್ಕುಣಿಕೆ ರಂಗನಾಥ ಬಡಾವಣೆ ಪ್ರೌಢಶಾಲೆಯಲ್ಲಿ "ಹಸಿರೇ ಉಸಿರು"ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು,



No comments

Post a Comment