ಕುಶಾಲನಗರ,ಮೇ೩೧: ಕುಶಾಲನಗರದ ಹಿರಿಯ ಪತ್ರಕರ್ತರೊಬ್ಬರು ಹಣ ಹಣದ ಬೇಡಿಕೆಯಿಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿಗಳು ಸೇರಿದಂತೆ ನಾನಾ ಇಲಾಖೆಗಳಿಗೆ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕರಾದ ಅಬ್ದುಲ್ ಸಲಾಂ ರಾವತರ್ ಅವರಿಂದ ದೂರು ನೀಡಲಾಗಿದೆ. ಈ ಕುರಿತು ಕುಶಾಲನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪತ್ರಿಕೆಯ ಹೆಸರನ್ನೇಳಿ ಹಣದ ಬೇಡಿಕೆಯಿಡುತ್ತಿದ್ದು, ಆಗಾಗ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಪತ್ರಕರ್ತನ ಹಣದ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ನಮ್ಮ ಸಂಸ್ಥೆಯ ವಿರುದ್ಧ ಪತ್ರಿಕೆಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. ನಮ್ಮ ಜಾಗಕ್ಕೆ ನಮ್ಮ ಅನುಮತಿ ಪಡೆಯದೇ ಫೋಟೋ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಹಾಕುತ್ತಿದ್ದಾರೆ. ಕಾನೂನಿಗೆ ತಲೆ ಬಾಗಿ ನಿಯಮಾನುಸಾರವಾರಿ ಸಂಸ್ಥೆಯನ್ನು ನಡೆಸುತ್ತಿರುವ ಬಗ್ಗೆ ಎಲ್ಲಾ ದಾಖಲೆಗಳು ಇದೆ. ಸಂಬಂಧಪಟ್ಟ ಗ್ರಾಮ.ಪಂ, ತಹಶಿಲ್ದಾರರಿಂದ ದಾಖಲಾತಿಗಳು ಸರಿಯಾಗಿರುವ ಬಗ್ಗೆ ನೀಡಿರುವ ಪತ್ರ ಕೂಡಾ ಇದೆ. ಆದರೂ ಪತ್ರಿಕೆಯಲ್ಲಿ ಸುಳ್ಳು ವರದಿಯನ್ನು ಬಿತ್ತರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪ್ರಧಾನ ಸಂಪಾದಕರನ್ನು ಭೇಟಿ ಮಾಡಿ ದೂರು ನೀಡಲಾಗಿದೆ. ಈ ಬಗ್ಗೆ ಪತ್ರಕರ್ತನ ವಿರುದ್ಧ ಮಾನನಷ್ಟ ಮುಕದ್ದಮೆಯನ್ನು ಹೂಡಲಾಗುವುದು ಎಂದರು. ಪ್ರತೀ ತಿಂಗಳು ಕಾವೇರಿ ನದಿ ಆರತಿ ಬೆಳಗುವ ಕಾರ್ಯಕ್ರಮಕ್ಕೆ ಹಣ ನೀಡಬೇಕು ಎಂದು ಡಿಮಾಂಡ್ ಮಾಡುತ್ತಿದ್ದು, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯನ್ನು ಹಣಕ್ಕಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಕುರಿತು ಎಸ್.ಪಿ, ಡಿ.ಸಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್, ಕುಶಾಲನಗರ ಪತ್ರಕರ್ತರ ಸಂಘ, ಕಾವೇರಿ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ ಸೇರಿದಂತೆ ಹಲವು ಇಲಾಖೆಗಳಿಗೆ ಕ್ರಮಕ್ಕಾಗಿ ಆಗ್ರಹಿಸಿ ದೂರು ನೀಡಲಾಗಿದೆ. ಪತ್ರಕರ್ತ ಹಣದ ಬೇಡಿಕೆ ಇಟ್ಟಿರುವುದಕ್ಕೆ ನನ್ನ ಬಳಿ ದಾಖಲೆಗಳಿದ್ದು, ಇವರ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದ್ದೇನೆ ಎಂದರು.
ಕುಶಾಲನಗರದ ಹಿರಿಯ ಪತ್ರಕರ್ತನಿಂದ ಹಣದ ಬೇಡಿಕೆ, ಕಿರುಕುಳ: ಕ್ರಮಕ್ಕಾಗಿ ಎಸ್.ಪಿ, ಡಿ.ಸಿ ಸೇರಿದಂತೆ ನಾನಾ ಇಲಾಖೆಗೆ ದೂರು
ಕುಶಾಲನಗರ,ಮೇ೩೧: ಕುಶಾಲನಗರದ ಹಿರಿಯ ಪತ್ರಕರ್ತರೊಬ್ಬರು ಹಣ ಹಣದ ಬೇಡಿಕೆಯಿಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು, ಕೊಡಗು ಜಿಲ್ಲಾಧಿಕಾರಿಗಳು ಸೇರಿದಂತೆ ನಾನಾ ಇಲಾಖೆಗಳಿಗೆ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕರಾದ ಅಬ್ದುಲ್ ಸಲಾಂ ರಾವತರ್ ಅವರಿಂದ ದೂರು ನೀಡಲಾಗಿದೆ. ಈ ಕುರಿತು ಕುಶಾಲನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪತ್ರಿಕೆಯ ಹೆಸರನ್ನೇಳಿ ಹಣದ ಬೇಡಿಕೆಯಿಡುತ್ತಿದ್ದು, ಆಗಾಗ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಪತ್ರಕರ್ತನ ಹಣದ ಬೇಡಿಕೆಯನ್ನು ನಿರಾಕರಿಸಿದ್ದಕ್ಕಾಗಿ ನಮ್ಮ ಸಂಸ್ಥೆಯ ವಿರುದ್ಧ ಪತ್ರಿಕೆಯಲ್ಲಿ ಸುಳ್ಳು ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. ನಮ್ಮ ಜಾಗಕ್ಕೆ ನಮ್ಮ ಅನುಮತಿ ಪಡೆಯದೇ ಫೋಟೋ ವೀಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣ ಹಾಗೂ ಪತ್ರಿಕೆಗಳಲ್ಲಿ ಹಾಕುತ್ತಿದ್ದಾರೆ. ಕಾನೂನಿಗೆ ತಲೆ ಬಾಗಿ ನಿಯಮಾನುಸಾರವಾರಿ ಸಂಸ್ಥೆಯನ್ನು ನಡೆಸುತ್ತಿರುವ ಬಗ್ಗೆ ಎಲ್ಲಾ ದಾಖಲೆಗಳು ಇದೆ. ಸಂಬಂಧಪಟ್ಟ ಗ್ರಾಮ.ಪಂ, ತಹಶಿಲ್ದಾರರಿಂದ ದಾಖಲಾತಿಗಳು ಸರಿಯಾಗಿರುವ ಬಗ್ಗೆ ನೀಡಿರುವ ಪತ್ರ ಕೂಡಾ ಇದೆ. ಆದರೂ ಪತ್ರಿಕೆಯಲ್ಲಿ ಸುಳ್ಳು ವರದಿಯನ್ನು ಬಿತ್ತರಿಸುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಪ್ರಧಾನ ಸಂಪಾದಕರನ್ನು ಭೇಟಿ ಮಾಡಿ ದೂರು ನೀಡಲಾಗಿದೆ. ಈ ಬಗ್ಗೆ ಪತ್ರಕರ್ತನ ವಿರುದ್ಧ ಮಾನನಷ್ಟ ಮುಕದ್ದಮೆಯನ್ನು ಹೂಡಲಾಗುವುದು ಎಂದರು. ಪ್ರತೀ ತಿಂಗಳು ಕಾವೇರಿ ನದಿ ಆರತಿ ಬೆಳಗುವ ಕಾರ್ಯಕ್ರಮಕ್ಕೆ ಹಣ ನೀಡಬೇಕು ಎಂದು ಡಿಮಾಂಡ್ ಮಾಡುತ್ತಿದ್ದು, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿಯನ್ನು ಹಣಕ್ಕಾಗಿ ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಈ ಕುರಿತು ಎಸ್.ಪಿ, ಡಿ.ಸಿ, ಕೊಡಗು ಜಿಲ್ಲಾ ಪತ್ರಕರ್ತರ ಸಂಘ, ಕೊಡಗು ಪ್ರೆಸ್ ಕ್ಲಬ್, ಕುಶಾಲನಗರ ಪತ್ರಕರ್ತರ ಸಂಘ, ಕಾವೇರಿ ಮಾಲಿನ್ಯ ಮತ್ತು ನಿಯಂತ್ರಣ ಮಂಡಳಿ ಸೇರಿದಂತೆ ಹಲವು ಇಲಾಖೆಗಳಿಗೆ ಕ್ರಮಕ್ಕಾಗಿ ಆಗ್ರಹಿಸಿ ದೂರು ನೀಡಲಾಗಿದೆ. ಪತ್ರಕರ್ತ ಹಣದ ಬೇಡಿಕೆ ಇಟ್ಟಿರುವುದಕ್ಕೆ ನನ್ನ ಬಳಿ ದಾಖಲೆಗಳಿದ್ದು, ಇವರ ವಿರುದ್ಧ ಕಾನೂನು ಸಮರ ಸಾರಲು ಮುಂದಾಗಿದ್ದೇನೆ ಎಂದರು.
