ಮಂಗಳೂರು/ಉಡುಪಿ:ಲೋಕಸಭಾ ಚುನಾವಣೆಯ ಪರಿಣಾಮ ಕರಾವಳಿಯ ಮೀನುಗಾರಿಕೆಗೂ ತಟ್ಟಿದೆ. ಇಲ್ಲಿನ ಮೀನು ಗಾರಿಕೆಯಲ್ಲಿ ದುಡಿಯುವ ಬಹುತೇಕ ಕಾರ್ಮಿಕರು ಒಡಿಶಾ,ಕೇರಳ, ತಮಿಳುನಾಡು, ಆಂಧ್ರದವರಾಗಿದ್ದು, ತಮ್ಮ ರಾಜ್ಯಗಳಿಗೆ ಮತದಾನ ಮಾಡಲು ತೆರಳಿರುವುದರಿಂದ ಮೀನುಗಾರಿಕೆಗೆ ಕಾರ್ಮಿಕರ ಕೊರತೆ ಎದು ರಾಗಿದೆ. ಪರಿಣಾಮವಾಗಿ ಮೀನುಗಳ ಬೆಲೆಯೂ ಏರಿದೆ!
ಮೂರನೇ ಹಂತದ ಚುನಾವಣೆ ಎ. 23ರಂದು ಜರಗಲಿದ್ದು, ಒಡಿಶಾ ದಲ್ಲಿ ಮೊದಲ ಮೂರೂ ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಹಾಗಾಗಿ ಒಡಿಶಾದ ಮೀನುಗಾರ ಕಾರ್ಮಿಕರ ಕೊರತೆ ಎಪ್ರಿಲ್ 25ರ ವರೆಗೂ ಇರಬಹುದು ಎಂದು ಮಂಗಳೂರಿನ ಟ್ರಾಲ್ಬೋಟ್ ಮೀನುಗಾರರ ಸಂಘ ತಿಳಿಸಿದೆ. ಮಲ್ಪೆ ಬಂದರಿನಲ್ಲಿ 700ಕ್ಕೂ ಅಧಿಕ ಬೋಟುಗಳು, ಮಂಗಳೂರು ಬಂದರಿನಲ್ಲಿ 250ಕ್ಕೂ ಹೆಚ್ಚಿನ ಬೋಟುಗಳು ಲಂಗರು ಹಾಕಿವೆ. ಸಹಜವಾಗಿಯೇ ಮೀನಿನ ದರದಲ್ಲೂ ಏರಿಕೆಯಾಗಿದೆ.
ಮಂಗಳೂರಿನ
ಹೆಚ್ಚಿನ ಬೋಟ್ಗಳು
ಮಹಾರಾಷ್ಟ್ರ, ಗೋವಾ, ರತ್ನಗಿರಿ ಕಡೆಗೆ ತೆರಳುತ್ತವೆ. 11 ದಿನಗಳ ಬಳಿಕ ಮರಳಿ ಬರುವ ಪ್ರತಿಯೊಂದು ಬೋಟಿನಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಮೀನುಗಳನ್ನು ಹೊತ್ತು ತರುತ್ತವೆ. ಆದರೆ ಬೋಟುಗಳ ಸಂಖ್ಯೆ ಹೆಚ್ಚಳ, ಹವಾಮಾನ ವೈಪರೀತ್ಯ ಕಾರಣದಿಂದಾಗಿ ಒಂದು ಟ್ರಿಪ್ನಲ್ಲಿ ಸುಮಾರು 75 ಸಾವಿರ ರೂ. ನಷ್ಟ ಉಂಟಾಗುತ್ತಿದೆ. ಈ ನಷ್ಟ ಸರಿದೂಗಿಸಲು ಅದರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ.
ಮೂರನೇ ಹಂತದ ಚುನಾವಣೆ ಎ. 23ರಂದು ಜರಗಲಿದ್ದು, ಒಡಿಶಾ ದಲ್ಲಿ ಮೊದಲ ಮೂರೂ ಹಂತಗಳಲ್ಲಿ ಚುನಾವಣೆ ನಡೆಯುತ್ತದೆ. ಹಾಗಾಗಿ ಒಡಿಶಾದ ಮೀನುಗಾರ ಕಾರ್ಮಿಕರ ಕೊರತೆ ಎಪ್ರಿಲ್ 25ರ ವರೆಗೂ ಇರಬಹುದು ಎಂದು ಮಂಗಳೂರಿನ ಟ್ರಾಲ್ಬೋಟ್ ಮೀನುಗಾರರ ಸಂಘ ತಿಳಿಸಿದೆ. ಮಲ್ಪೆ ಬಂದರಿನಲ್ಲಿ 700ಕ್ಕೂ ಅಧಿಕ ಬೋಟುಗಳು, ಮಂಗಳೂರು ಬಂದರಿನಲ್ಲಿ 250ಕ್ಕೂ ಹೆಚ್ಚಿನ ಬೋಟುಗಳು ಲಂಗರು ಹಾಕಿವೆ. ಸಹಜವಾಗಿಯೇ ಮೀನಿನ ದರದಲ್ಲೂ ಏರಿಕೆಯಾಗಿದೆ.
ಮಂಗಳೂರಿನ
ಹೆಚ್ಚಿನ ಬೋಟ್ಗಳು
ಮಹಾರಾಷ್ಟ್ರ, ಗೋವಾ, ರತ್ನಗಿರಿ ಕಡೆಗೆ ತೆರಳುತ್ತವೆ. 11 ದಿನಗಳ ಬಳಿಕ ಮರಳಿ ಬರುವ ಪ್ರತಿಯೊಂದು ಬೋಟಿನಲ್ಲಿ ಸುಮಾರು 7 ಲಕ್ಷ ರೂ. ಮೌಲ್ಯದ ಮೀನುಗಳನ್ನು ಹೊತ್ತು ತರುತ್ತವೆ. ಆದರೆ ಬೋಟುಗಳ ಸಂಖ್ಯೆ ಹೆಚ್ಚಳ, ಹವಾಮಾನ ವೈಪರೀತ್ಯ ಕಾರಣದಿಂದಾಗಿ ಒಂದು ಟ್ರಿಪ್ನಲ್ಲಿ ಸುಮಾರು 75 ಸಾವಿರ ರೂ. ನಷ್ಟ ಉಂಟಾಗುತ್ತಿದೆ. ಈ ನಷ್ಟ ಸರಿದೂಗಿಸಲು ಅದರ ಹೊರೆ ಗ್ರಾಹಕರ ಮೇಲೆ ಬೀಳುತ್ತಿದೆ.
Source :Udayavani

No comments
Post a Comment